ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಜ್ಞಾನಭಾರತಿ ಮೆಟ್ರೋ ನಿಲ್ದಾಣದ ಬಳಿ ಸರಣಿ ಅಪಘಾತವಾಗಿದೆ. ಕೆಎಸ್ಆರ್ಟಿಸಿ ಬಸ್ ಮತ್ತು ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು ಪರಿಣಾಮ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದು ಪಕ್ಕದಲ್ಲಿದ್ದ ವಾಹನಗಳಿಗೂ ಡ್ಯಾಮೇಜ್ ಆಗಿದೆ.
ಅಪಘಾತದ ಭೀಕರತೆ ಎಷ್ಟು ಇತ್ತು ಅಂದ್ರೆ ಡಿವೈಡರ್ಗೆ ಗುದ್ದಿ ಬಸ್ ಆಚೆಗೆ ಬಂದಿದೆ. ಬಲಬದಿಯಿಂದ ಬಸ್ನ್ನು ಓವರ್ಟೇಕ್ ಮಾಡಲು ಬಂದ ಆಟೋ ಚಾಲಕ ಬಸ್ ಹಾಗೂ ಡಿವೈಡರ್ ನಡುವೆ ಸಿಲುಕಿ ಇಡೀ ಆಟೋವೇ ಜಖಂಗೊಂಡಿದೆ. ಇದರ ಜೊತೆಗೆ ಒಂದು ಕಾರ್ನ ಹಿಂಭಾಗವೂ ಕೂಡ ಛಿದ್ರಗೊಂಡಿದ್ದು, ಖಾಸಗಿ ಬಸ್ಗೂ ಕೂಡ ಹಾನಿಯುಂಟಾಗಿದೆ.
ಇನ್ನು ಇಬ್ಬರೂ ಚಾಲಕರಿಗೂ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.