ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಹಲವು ನಿರ್ಬಂಧ ಹೇರಿ ಪಾಕ್ನ ಬೆವರಿಳಿಸುತ್ತಿರುವ ಭಾರತ ಈಗ ಮತ್ತೊಂದು ಆಘಾತ ನೀಡಿದೆ.
ಸಿಂಧೂ ನದಿ ನೀರು ಸ್ಥಗಿತದ ಬಳಿಕ ಈಗ ಬಾಗ್ಲಿಹಾರ್ ಅಣೆಕಟ್ಟು, ಝೀಲಂ ನದಿಯ ಕಿಶನ್ಗಂಗಾ ಅಣೆಕಟ್ಟಿನ ನೀರನ್ನೂ ಬಂದ್ ಮಾಡಿದ್ದು, ಪಾಕ್ಗೆ ಮತ್ತೊಂದು ಮರ್ಮಾಘಾತ ನೀಡಿದೆ. ಜಮ್ಮುವಿನ ರಾಂಬನ್ನಲ್ಲಿರುವ ಬಾಗ್ಲಿಹಾರ್ ಹಾಗೂ ಉತ್ತರ ಕಾಶ್ಮೀರದ ಕಿಶನ್ಗಂಗಾ ಈ ಎರಡೂ ಅಣೆಕಟ್ಟು ಜಲವಿದ್ಯುತ್ ಕೇಂದ್ರಗಳಾಗಿವೆ ಎನ್ನುವುದು ಇನ್ನೊಂದು ಪ್ರಮುಖ ಅಂಶ.
ಈ ಹಿಂದೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಡೆದ ಸಿಂಧೂ ಜಲ ಒಪ್ಪಂದವು ೧೯೬೦ ರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ಮತ್ತು ಅದರ ಉಪನದಿಗಳ ಬಳಕೆಯನ್ನು ನಿರ್ಧರಿಸಿತ್ತು. ಇನ್ನು ಬಾಗ್ಲಿಹಾರ್ ಅಣೆಕಟ್ಟು ಎರಡೂ ದೇಶಗಳ ನಡುವೆ ದೀರ್ಘಕಾಲದ ವಿವಾದ ಹೊತ್ತುಕೊಂಡಿದ್ದು, ಈ ಹಿಂದೆ ಪಾಕಿಸ್ತಾನ ಇದೇ ವಿಚಾರವಾಗಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯನ್ನು ಕೂಡಾ ಕೋರಿತ್ತು.