ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾವೊಂದಕ್ಕೆ ಬ್ರಾಹ್ಮಣರು ಅಡ್ಡಿಮಾಡುತ್ತಿದ್ದಾರೆ ಎನ್ನುವ ಸಿಟ್ಟಿನಲ್ಲಿ ಡೈರೆಕ್ಟರ್ ಅನುರಾಗ್ ಕಶ್ಯಪ್ ತಮ್ಮ ನಾಲಿಗೆ ಹರಿಬಿಟ್ಟಿದ್ದರು. ಬ್ರಾಹ್ಮರಣ ಮೇಲೆ ಮೂತ್ರ ಮಾಡ್ತೇನೆ ಎಂದು ಹೇಳಿ ಇದೀಗ ಅದಕ್ಕೆ ಕ್ಷಮೆಯಾಚಿಸಿದ್ದಾರೆ.
ಜೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಜೀವನ ಆಧರಿಸಿದ ‘ಫುಲೆ’ ಸಿನಿಮಾಕ್ಕೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ. ಇದೇ ಕಾರಣಕ್ಕೆ ಅನುರಾಗ್ ಕಶ್ಯಪ್ ಸಿಟ್ಟಾಗಿದ್ದು ಸಿಬಿಎಫ್ಸಿ ವಿರುದ್ಧ ಹರಿಹಾಯ್ದಿದ್ದರು.
ಪಂಜಾಬ್ 95, ತೀಸ್, ಧಡಕ್ 2 ಈಗ ಫುಲೆ ಒಂದರ ಹಿಂದೊಂದು ಸಿನಿಮಾಗಳಿಗೆ ತಡೆ ಒಡ್ಡಲಾಗುತ್ತಿದೆ. ಜಾತೀವಾದಿ, ಧರ್ಮವಾದಿ, ಜನಾಂಗೀಯವಾದಿ ಸರ್ಕಾರ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಹೆದರುತ್ತಿದೆ. ಅವರಿಗೆ ಯಾವುದು ಸಮಸ್ಯೆ ಎಂದು ಬಹಿರಂಗವಾಗಿ ಹೇಳಲು ಸಹ ಅವರಿಂದ ಸಾಧ್ಯವಾಗುತ್ತಿಲ್ಲ.
ಪ್ರಧಾನಿ ಮೋದಿ ಅವರು ಹೇಳಿರುವಂತೆ ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ, ಹಾಗಿದ್ದ ಮೇಲೆ ‘ಫುಲೆ’ ಸಿನಿಮಾ ಬಿಡುಗಡೆ ಮಾಡಲು ಸಮಸ್ಯೆ ಏನು? ಜಾತಿ ವ್ಯವಸ್ಥೆ ಇಲ್ಲ ಎಂದಾದಮೇಲೆ ನಿಮಗೇಕೆ ಉರಿಯುತ್ತಿದೆ ಎಂದು ‘ಫುಲೆ’ ಸಿನಿಮಾ ವಿರೋಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ಪ್ರಶ್ನೆ ಮಾಡಿದ್ದರು. ಇದರ ಜೊತೆಗೆ ಕಮೆಂಟ್ ಒಂದರ ಮೇಲೆ ಬ್ರಾಹ್ಮಣರ ಮೇಲೆ ಮೂತ್ರ ಮಾಡ್ತೇನೆ ಎಂದು ಹೇಳಿದ್ದರು. ಇದಕ್ಕೆ ಅನುರಾಗ್ ಕ್ಷಮೆಯಾಚಿಸಿದ್ದಾರೆ.