ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮಹೋನ್ ರೆಡ್ಡಿ ಸರ್ಕಾರ ಸ್ವಚ್ಚತೆಯ ಕಡೆಗೆ ಗಮನ ಹರಿಸಿದ್ದು, ಪೌರ ಕಾರ್ಮಿಕರಿಗೆ ಸಹಾಯವಾಗಲೆಂದು ಸ್ವಚ್ಛತಾ ಯಂತ್ರಗಳಿಗೆ ಚಾಲನೆ ನೀಡಿದರು. ಸ್ವಚ್ಛ ಆಂಧ್ರ ನಿಗಮದ ವತಿಯಿಂದ ಸ್ವಚ್ಛತಾ ಯೋಜನೆಯಡಿ 100 ಕೊಳಚೆ ನೀರು ಸಂಸ್ಕರಣಾ ವಾಹನಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಶ್ರೀಲಕ್ಷ್ಮಿ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಜಿ.ಜಯಲಕ್ಷ್ಮಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಉನ್ನತಾಧಿಕಾರಿಗಳು ಭಾಗವಹಿಸಿದ್ದರು.
ಪರಿಸರದ ಸರ್ವಾಂಗೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡಿದ ಆಂಧ್ರ ಸರ್ಕಾರ ಕೊಳಚೆ ನೀರು, ಕಸ ವಿಲೇವಾರಿ ವಾಹನಗಳು ಲಭ್ಯವಾಗುವಂತೆ ಮಾಡಿದೆ. ಹಸಿರು ಧ್ವಜ ಬೀಸುವ ಮೂಲಕ ವಾಹನಗಳಿಗೆ ಚಾಲನೆ ನೀಡಿ ಪೌರ ಕಾರ್ಮಿಕರಿಗೆ ವಾಹನಗಳ ಕೀಯನ್ನು ಹಸ್ತಾಂತರಿಸಿದರು.