ಮುಡಾ ಫೈಲ್ಸ್‌ ಸುಟ್ಟುಹಾಕಿರೋ ಭೈರತಿ ಸುರೇಶ್‌ರನ್ನು ಈಗಲೇ ಬಂಧಿಸಿ: ಶೋಭಾ ಕರಂದ್ಲಾಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭೈರತಿ ಸುರೇಶ್ ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ತನಿಖಾ ಸಂಸ್ಥೆಗಳು ಬಂಧನ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ

ಮುಡಾ ಕೇಸ್‌ನಲ್ಲಿ ಸಿದ್ದರಾಮಯ್ಯರನ್ನು ರಕ್ಷಿಸಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಪ್ರಯತ್ನ ಮಾಡುತ್ತಿದ್ದಾರೆ. ಮುಡಾದ ಎಲ್ಲಾ ಫೈಲ್‌ಗಳನ್ನು ತಂದು ಸುರೇಶ್ ಸುಟ್ಟು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಡಾದ ಫೈಲ್‌ಗಳನ್ನು ಸುರೇಶ್ ತಂದಿರುವುದು ಸತ್ಯ. ಫೈಲ್‌ಗಳನ್ನು ಸುಟ್ಟಿರುವುದು ಸತ್ಯ. ಮುಡಾ ಫೈಲ್‌ಗಳನ್ನು ಗಾಯಬ್ ಮಾಡಿದ್ದಾರೆ ಎಂದು ನಮಗೆ ಮಾಹಿತಿ ಲಭಿಸಿದೆ. ಹೀಗಾಗಿ ಕೂಡಲೇ ಬೈರತಿ ಸುರೇಶ್‌ನ್ನು ಬಂಧನ ಮಾಡಿದರೆ ಎಲ್ಲಾ ಮಾಹಿತಿ ಹೊರಗೆ ಬರುತ್ತದೆ. ಫೈಲ್ ಎಲ್ಲಿ ಹೋಯಿತು? ಎಲ್ಲಿ ಸುಟ್ಟು ಹಾಕಿದರು? ಎನ್ನುವ ಎಲ್ಲಾ ಸತ್ಯ ಹೊರಗೆ ಬರುತ್ತದೆ. ಹೀಗಾಗಿ ಕೂಡಲೇ ಬೈರತಿ ಸುರೇಶ್ ಬಂಧನ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!