ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಉದ್ವಿಗ್ನತೆ ಮುಂದುವರಿದಿದ್ದು, ಈ ನಡುವೆ ಶಿವಸೇನೆ ನಾಯಕ ಸಂಜಯ್ ರಾವುತ್ ಕಿಡಿ ಹೊತ್ತಿಸುವಂತ ಹೇಳಿಕೆಯೊಂದನ್ನು ನೀಡಿದ್ದಾರೆ.
ಚೀನಾ ಭಾರತದೊಳಗೆ ನುಗ್ಗಿದಂತೆ ನಾವು ಕರ್ನಾಟಕದೊಳಗೆ ನುಗ್ಗಲಿದ್ದೇವೆ ಎಂದು ಹೇಳಿ ಗಡಿ ಗಲಾಟೆ ಕಾವು ಹೆಚ್ಚಿಸಿದ್ದಾರೆ. ನಾವು ಕರ್ನಾಟಕ ಪ್ರವೇಶಿಸುತ್ತೇವೆ, ಇದಕ್ಕೆ ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಹೇಳಿದ್ದಾರೆ.
ದಶಕಗಳ ಹಿಂದಿನಿಂದಲೂ ಗಡಿ ಸಂಘರ್ಷದ ಕುರಿತು ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಉದ್ವಿಗ್ನತೆ ಬೂದಿ ಮುಚ್ಚಿದ ಕೆಂಡದಂತಿತ್ತು. ಈ ಬೆನ್ನಲ್ಲೇ ಈ ರೀತಿ ಹೇಳಿಕೆಯಿಂದ ಇನ್ನಷ್ಟು ಕಾವೇರುವ ಸಾಧ್ಯತೆ ಹೆಚ್ಚಿದೆ.