ರಾಜಾಸಿಂಗ್ ಜೈಲಿಗೆ ಹೋದರೆ ಶಾಂತಿ ನೆಲೆಸುತ್ತದೆ: ಅಸಾದುದ್ದೀನ್‌ ಓವೈಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೈದರಾಬಾದ್‌ನ ಪಾತಬಸ್ತಿಯಲ್ಲಿ ನಡೆಯುತ್ತಿರುವ ಆಂದೋಲನದ ಬಗ್ಗೆ ಪ್ರತಿಕ್ರಿಯಿಸಿದ್ದು, ”ರಾಜಾಸಿಂಗ್ ಪ್ರವಾದಿ ಕುರಿತ ಹೇಳಿಕೆಯಿಂದಲೇ ಈ ಸನ್ನಿವೇಶಗಳು ಎದುರಾಗುತ್ತಿವೆ. ಅವರನ್ನು ಆದಷ್ಟು ಬೇಗ ಜೈಲಿಗೆ ಕಳುಹಿಸಿದರೆ ಎಲ್ಲವೂ ಸರಿಹೋಗುತ್ತದೆ. ಅಲ್ಲದೆ, ಶಾಂತಿಯುತ ವಾತಾವರಣಕ್ಕೆ ಸರ್ವರೂ ಸಹಕರಿಸಬೇಕೆಂದು ಹೇಳಿದರು. ಹೈದರಾಬಾದ್ ನಮ್ಮ ಮನೆ ಇದ್ದಂತೆ, ಕೋಮುವಾದಿ ಬಲೆಯಲ್ಲಿ ಸಿಲುಕಿಕೊಳ್ಳಬೇಡಿ.” ಎಂದು ಕರೆ ನೀಡಿದರು.

ಶಾ ಅಲಿ ಬಂಡ ಮತ್ತು ಆಶಾ ಥಿಯೇಟರ್‌ಗಳಲ್ಲಿ 90 ಯುವಕರನ್ನು ಪೊಲೀಸರು ಬಂಧಿಸಿ, ಡಿಸಿಪಿ ಅವರ ಮನವಿಯ ಮೇರೆಗೆ ಅವರನ್ನು ಬಿಡುಗಡೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕೆಲವರ ಮನೆಗೆ ನುಗ್ಗಿ ಐವರನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ, ಇದು ಸರಿಯಲ್ಲ. ಪಾತಬಸ್ತಿಯಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಭಾರೀ ಬಂದೋಬಸ್ತ್ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!