ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂಟಿತನ ಅನ್ನೋದು ಕೆಲವು ರಾಶಿಚಕ್ರ ಚಿಹ್ನೆಗಳ ಸ್ವಭಾವ, ಭಾವನೆಗಳನ್ನು ವ್ಯಕ್ತಪಡಿಸುವ ಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ. ಒಂಟಿತನದ ಭಾವನೆಗೆ ಕೇವಲ ಹೊರಗಿನ ಪರಿಸ್ಥಿತಿಗಳಷ್ಟೇ ಕಾರಣವಾಗುವುದಿಲ್ಲ. ವ್ಯಕ್ತಿಯ ಮನಸ್ಸು, ಭಾವನೆಗಳನ್ನು ಹೊಂದುವ ರೀತಿ ಮತ್ತು ತಾಳ್ಮೆಯ ಮಟ್ಟ ಕೂಡ ಬಹುಮಟ್ಟಿಗೆ ಕಾರಣವಾಗಬಹುದು.
ಇವತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ರಾಶಿಯವರು ಹೆಚ್ಚು ಒಂಟಿತನಕ್ಕೆ ಒಳಗಾಗುತ್ತಾರೆ? ಮತ್ತು ಅವರಲ್ಲಿ ಈ ಭಾವನೆ ಏಕೆ ಉಂಟಾಗುತ್ತವೆ ಎಂಬುದನ್ನೂ ತಿಳಿಯೋಣ.
ಮಕರವು ಶನಿಯಿಂದ ಆಳಲ್ಪಟ್ಟ ರಾಶಿಯಾಗಿದೆ. ಈ ರಾಶಿಯವರು ತಮ್ಮ ಭಾವನೆಗಳನ್ನು ಬಹಿರಂಗಪಡಿಸುವುದನ್ನು ದುರ್ಬಲತೆಯಂತೆ ಪರಿಗಣಿಸುತ್ತಾರೆ. ಅವರ ಆದ್ಯತೆ ಸುದೀರ್ಘ ಗುರಿಗಳು, ಕಾರ್ಯಕ್ಷಮತೆ, ಯಶಸ್ಸು. ಸಂಬಂಧಗಳು ಎರಡನೇ ಸ್ಥಾನದಲ್ಲಿರುತ್ತವೆ.
ಕರ್ಕಾಟಕವು ಚಂದ್ರನಿಂದ ಆಳಲ್ಪಟ್ಟ ನೀರಿನ ರಾಶಿ. ಈ ರಾಶಿಯವರು ತುಂಬಾ ಭಾವನಾತ್ಮಕ, ಸಂವೇದನಾಶೀಲರು. ಇವರು ಆಳವಾದ ಸಂಬಂಧಗಳನ್ನು ಬಯಸುತ್ತಾರೆ, ಆದರೆ ಭಯದಿಂದ ಅಥವಾ ನೋವಿನಿಂದ ತಮ್ಮ ಭಾವನೆಗಳನ್ನು ಹೊರಹಾಕಲು ಇಚ್ಛಿಸುವುದಿಲ್ಲ.
ಕುಂಭವು ಯುರೇನಸ್ನಿಂದ ಆಳಲ್ಪಡುವ ವಾಯು ರಾಶಿಯಾಗಿದ್ದು, ಬುದ್ಧಿವಂತಿಕೆ, ನಾವೀನ್ಯತೆ ಮತ್ತು ಸ್ವಾತಂತ್ರ್ಯಕ್ಕೆ ಹೆಸರುವಾಸಿ. ಈ ರಾಶಿಯವರು ಆಳವಾದ ಒಂಟಿತನವನ್ನು ಅನುಭವಿಸುತ್ತಿರುತ್ತಾರೆ. ಅವರು ತಮ್ಮ ಭಾವನೆ, ಅನುಭವಗಳನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ.