ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉಪ್ಪಿನಂಗಡಿ ಕುಮಾರಧಾರಾ ನದಿಯ ಹೊಸ ಸೇತುವೆಯಲ್ಲಿ ಅಟೋ ರಿಕ್ಷಾ ಹಾಗೂ ಲಾರಿಯ ನಡುವೆ ಡಿಕ್ಕಿ ಸಂಭವಿಸಿ ಅಟೋ ರಿಕ್ಷಾದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಪೆರ್ನೆಯ ಫ್ರಾಂಕ್ಲಿನ್ ಗ್ಲನ್ ಲೋಬೋ (23) ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋ ರಿಕ್ಷಾ ಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಾಗ ರಿಕ್ಷಾದಲ್ಲಿ ಚಾಲಕ ಹಾಗೂ ಪ್ರಯಾಣಿಕರಾದ ಅಜಯ್ ಖಾರ್ವಾಲ್ (17) , ಪೂರನ್ ಸಿಂಗ್ ಖಾರ್ವಾಲ್ (29) ಎಂಬವರು ಗಾಯಗೊಂಡರು ಗಾಯಾಳು ಪ್ರಯಾಣಿಕರು ಉತ್ತರ ಭಾರತೀಯರಾಗಿದ್ದು, ಕೂಲಿ ಕಾರ್ಮಿಕರಾಗಿ ಪೆರ್ನೆ ಪರಿಸರದಲ್ಲಿ ದುಡಿಯುತ್ತಿದ್ದರೆನ್ನಲಾಗಿದೆ.
ಘಟನೆಯಿಂದ ನಜ್ಜುಗುಜ್ಜಾದ ಅಟೋದಲ್ಲಿದ್ದ ಚಾಲಕ ಫ್ರಾಂಕ್ಲಿನ್ ಗ್ಲನ್ ಲೋಬೋ ಕಾಲು ತುಂಡರಿಸಲ್ಪಟ್ಟಿದ್ದು, ಗಾಯಾಳುಗಳೆಲ್ಲರನ್ನು ಉಪ್ಪಿನಂಗಡಿಯ ಅಂಬುಲೆನ್ಸ್ ಚಾಲಕ ಫಾರೂಕ್ ಜಿಂದಗಿ ತ್ವರಿತವಾಗಿ ಆಸ್ಪತ್ರೆಗೆ ರವಾನಿಸುವಲ್ಲಿ ಸಹಕರಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಘಟನೆಯಿಂದ ತಡೆಹಿಡಿಯಲ್ಪಟ್ಟ ಹೆದ್ದಾರಿ ಸಂಚಾರವನ್ನು ಸುಗಮಗೊಳಿಸುವಲ್ಲಿ ಯಶಸ್ವಿಯಾದರು.