ಹೊಸ ದಿಗಂತ ವರದಿ, ಮುಂಡಗೋಡ:
ದೇವಸ್ಥಾನಕ್ಕೆ ಹೊರಟ ಕಾರೊಂದು ಗುಂಡಿ ತಪ್ಪಿಸಲು ಹೋಗಿ ಪಲ್ಟಿಯಾಗಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಪಟ್ಟಣ ಎಪಿಎಮಸಿ ಹತ್ತಿರ ಜರುಗಿದೆ.
ರೂಪಾಲಿ ಗುದಲಿ ( 42 ) ಅಪಘಾತದಲ್ಲಿ ಮೃತಪಟ್ಟ ಮಹಿಳೆಯಾಗಿದ್ದಾಳೆ. ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವರಾಗಿದ್ದು ಕುಟುಂಬದ ಏಳು ಜನ ಸದಸ್ಯರು ಕೊಲ್ಲಾಪುರದಿಂದ ಪದ್ಮಾವತಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಪಟ್ಟಣದ ಎಪಿಎಮಸಿ ಸನಿಹದಲ್ಲಿ ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿದೆ. ಈ ಅವಘಡದಿಂದಾ ಕಾರಿನಲ್ಲಿದ್ದ ಮಹಿಳೆಯು ಸ್ಥಳದಲ್ಲಿ ಮೃತಪಟ್ಟದ್ದಾಳೆ ಕುಟುಂಬದ ಉಳಿದ ಸದಸ್ಯರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.