ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಸಹಸ್ರಾರು ಜನ ಅಯೋಧ್ಯೆಯತ್ತ ಹೊರಟಿದ್ದಾರೆ.
ಇದೀಗ ಅಯೋಧ್ಯೆ To ಬೆಂಗಳೂರು (Ayodhya – Bengaluru Flight ) ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ.
ಅಯೋಧ್ಯೆ ಮತ್ತು ಬೆಂಗಳೂರು, ಅಯೋಧ್ಯೆ ಮತ್ತು ಕೋಲ್ಕತ ಸಂಪರ್ಕಿಸುವ ವಿಮಾನ ಯಾನಕ್ಕೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಾಲನೆ ನೀಡಿದರು.
ಅಯೋಧ್ಯೆ ಮತ್ತು ಬೆಂಗಳೂರು ನಡುವಿನ ಮೊದಲ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಹಾರಾಟಕ್ಕೆ ಅವರು ಹಸಿರು ನಿಶಾನೆ ತೋರಿದರು. ಇದೇ ಸಂದರ್ಭ ಕೋಲ್ಕತ್ತಾ ಮತ್ತು ಅಯೋಧ್ಯೆ ನಡುವೆ ವಿಮಾನ ಹಾರಾಟಕ್ಕೂ ಸಹ ಚಾಲನೆ ಸಿಕ್ಕಿದ್ದು, ಆಯಾ ವಿಮಾನಗಳು ಸದ್ಯ ವಾರಕ್ಕೆ 3 ಬಾರಿ ಹಾರಾಟ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿರು.
ಇದೇ ಮಾರ್ಚ್ 1 ರಿಂದ ಹೈದರಾಬಾದ್ ಟು ವಾರಣಾಸಿಗೆ ವಿಮಾನ ಸಂಪರ್ಕ ಕಲ್ಪಿಸುತ್ತೇವೆ ಎಂದು ಸಿಂಧಿಯಾ ಹೇಳಿದರು.
ಟಿಕೆಟ್ ದರ ಎಷ್ಟು?
ಇಂದು ಚಾಲನೆ ಸಿಕ್ಕಿರುವ ವಿಮಾನ ವಾರದಲ್ಲಿ ಮೂರು ಬಾರಿ ಅಯೋಧ್ಯೆ ಟು ಬೆಂಗಳೂರು ನಡುವೆ ಹಾರಾಡಲಿದೆ ಎಂದಷ್ಟೇ ಕೇಂದ್ರ ಸಚಿವರು ಹೇಳಿದ್ದಾರೆ. ಆದ್ರೆ, ಟಿಕೆಟ್ ಹಾಗೂ ಸಮಯದ ಬಗ್ಗೆ ಇನ್ನೂ ಸಂಸ್ಥೆ ಅಧಿಕೃತ ಮಾಹಿತಿ ನೀಡಿಲ್ಲ.
ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಇಂದು (ಜ.17) ಬೆಂಗಳೂರು – ಅಯೋಧ್ಯೆ ವಿಮಾನ ಟಿಕೆಟ್ ದರ 10 ಸಾವಿರ ರೂಪಾಯಿಯಿಂದ 20,000 ರೂಪಾಯಿ ಇದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್ ದರಲ್ಲಿ ಭಾರೀ ಏರಿಕೆಯಾಗಿದೆ. ಜನವರಿ 20ಕ್ಕೂ ಮುನ್ನವೇ ಎಲ್ಲಾ ವಿಮಾನಗಳ ಟಿಕೆಟ್ ಈಗಾಗಲೇ ಬುಕ್ ಆಗಿವೆ. ಎಷ್ಟೇ ಪ್ರಯತ್ನಪಟ್ಟರೂ ವಿಮಾನಗಳ ಟಿಕೆಟ್ ಸಿಗದಂತಾಗಿದೆ. ಕೆಲವೇ ಟಿಕೆಟ್ಗಳು ಲಭ್ಯವಿದ್ದರೂ ಕೂಡಾ ಬೆಲೆ ಕೈಗೆಟುಕದಂತಾಗಿದೆ.