ಬದರಿನಾಥದ ಹೆದ್ದಾರಿಯಲ್ಲಿ10 ಕಡೆ ಭಾರೀ ಬಿರುಕು, ಚಾರ್‌ಧಾಮ್ ಯಾತ್ರೆಗೆ ಭೂಕುಸಿತದ ಆತಂಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದರಿನಾಥದ್ ಹೆದ್ದಾರಿಯಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದ್ದು, ಚಾರ್ ಧಾಮ್ ಯಾತ್ರೆಗೆ ಭೂಕುಸಿತದ ಆತಂಕ ಕಾಡುತ್ತಿದೆ.

ಉತ್ತರಖಂಡ ಸರ್ಕಾರ ಇತ್ತೀಚೆಗಷ್ಟೇ ಚಾರ್‌ಧಾಮ್ ಯಾತ್ರೆಯ ದಿನಾಂಕ ಘೋಷಿಸಿದೆ. ಈ ಬೆನ್ನಲ್ಲೇ ಬಿರುಕು ಕಾಣಿಸಿರುವುದು ಆತಂಕಕ್ಕೀಡುಮಾಡಿದೆ. ಬದರೀನಾಥದ ಹೆದ್ದಾರಿಯಲ್ಲಿ 10 ಕಡೆ ಬಿರುಕು ಕಾಣಿಸಿದೆ, ಜೋಶಿಮಠ ಮತ್ತು ಮರ್‌ವಾರಿ ಗ್ರಾಮ ಮಾರ್ಗದ ಮಧ್ಯೆ ಬಿರುಕು ಕಾಣಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಬದರೀನಾಥ ತಲುಪಲು ಈ ರಸ್ತೆ ಪ್ರಮುಖವಾದ್ದಾಗಿದ್ದು, 10 ಕಡೆ ಹೊಸತಾಗಿ ಬಿರುಕು ಕಾಣಿಸಿರುವುದು ಎಲ್ಲರಿಗೂ ಭಯ ಹುಟ್ಟಿಸಿದೆ. ಈ ಮೊದಲು ಕಾಣಿಸಿದ್ದ ಬಿರುಕಗಳು ದೊಡ್ಡದಾಗುತ್ತಾ ಇವೆ ಎಂದು ಜೋಶಿಮಠ ಉಳಿಸಿ ಸಂಘರ್ಷ ಸಮಿತಿ ಕಾರ್ಯಕರ್ತ ಸಂಜಯ್ ಉನಿಯಾಲ್ ಹೇಳಿದ್ದಾರೆ.

ಈ ಹಿಂದೆಯೂ ಬಿರುಕುಗಳು ಕಾಣಿಸಿದ್ದು, ಅದನ್ನು ಮುಚ್ಚಲಾಗಿತ್ತು. ಆದರೆ ಇದೀಗ ಅವೆಲ್ಲಾ ಮತ್ತೆ ಬಾಯ್ತೆರೆದಿದ್ದು, ದೊಡ್ಡದಾಗುತ್ತಲೇ ಇದೆ ಎಂದು ಸ್ಥಳೀಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!