ಇಂದು ಕೂಡ ದರ್ಶನ್ ಗೆ ಸಿಗದ ಜಾಮೀನು: ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಇಂದು ಕೂಡ ಜಾಮೀನು ಸಿಗಲಿಲ್ಲ. ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಬುಧವಾರಕ್ಕೆ ಮುಂದೂಡಿದೆ.

57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ ನಡೆಯಿತು. ಆಕ್ಷೇಪಣಾ ವಾದವನ್ನು ಎಸ್‌ಪಿಪಿ ಪ್ರಸನ್ನಕುಮಾರ್ ಮಂಡಿಸಿದರು.

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಓದಿದ ಎಸ್‌ಪಿಪಿ, ಬಲ ಭಾಗದಲ್ಲಿ ರೇಣುಕಾಸ್ವಾಮಿ ಪಕ್ಕೆಲುಬು ಮುರಿದು ಶ್ವಾಸಕೋಶಕ್ಕೆ ಚುಚ್ಚಿದೆ. ಎಡಭಾಗದಲ್ಲಿ ಕೂಡ ಪಕ್ಕೆಲುಬುಗಳು ಮುರಿದಿದೆ. 17 ಬಲವಾದ ಪೆಟ್ಟುಗಳು ಶ್ವಾಸಕೋಶ, ಪಕ್ಕೆಲುಬುಗಳ ಬಳಿಯೇ ಬಿದ್ದಿದೆ. ಮರಣೋತ್ತರ ಪರೀಕ್ಷೆ ತಡ ಅಂದಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಉತ್ತರ ಬಂದಿದೆ. ರೇಣುಕಾಸ್ವಾಮಿ ಸಾವು ಸಂಭವಿಸುವ ಮುನ್ನ ಎಲ್ಲಾ ಪೆಟ್ಟುಗಳು ಬಿದ್ದಿವೆ ಅಂತಾ ಇದೆ. ಸಾವು ಸಂಭವಿಸಿದ ಬಳಿಕ ಯಾವುದೇ ಬಲವಾದ ಪೆಟ್ಟು ಬಿದ್ದಿಲ್ಲ ಎಂದು ತಿಳಿಸಿದರು.

ಸೋಡಿಯಂ ಪರೀಕ್ಷೆ ನಡೆಸಲಾಗಿದೆ. 39 ಮಾರಣಾಂತಿಕ ಹಲ್ಲೆ ಆಗಿದೆ. ಮರಣೋತ್ತರ ಪರೀಕ್ಷೆಯನ್ನು ವಿಡಿಯೋಗ್ರಫಿ ಮಾಡಲಾಗಿದೆ. ಇದರಲ್ಲಿ ಕೂಡ ಯಾವುದೇ ಮರೆಮಾಚುವ ಕೆಲಸ ಆಗಿಲ್ಲ. 13 ಬಲವಾದ ಪೆಟ್ಟುಗಳನ್ನು ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಹಿಡಿದಿದ್ದಾರೆ. ಇದೆಲ್ಲವೂ ಕೂಡ ಬಹಿರಂಗವಾಗಿ ಕಾಣುವ ಗಾಯಗಳು. ತಲೆಗೆ ಲಾರಿಯನ್ನು ಬಲವಾಗಿ ಗುದ್ದಿಸಿರೋದು ಗೊತ್ತಾಗಿದೆ. ಇನ್ನೊಂದು ಬಲವಾದ ಪೆಟ್ಟು ಬಿದ್ದಿರೋದು ಎದೆಯ ಮೇಲೆ. ವೈದ್ಯರು ಹೇಳ್ತಾರೆ, ಇದು ಬಲವಾಗಿ ಮನುಷ್ಯ ತುಳಿದಿರೋದ್ರಿಂದ ಅಂತಾ. ಮರ್ಮಾಂಗದ ಮೇಲೂ ಕೂಡ ಭಯಂಕರವಾದ ಹಲ್ಲೆ ಮಾಡಿದ್ದಾರೆ. ಮರ್ಮಾಂಗದ ವೃಷಣ ಚೀಲದಲ್ಲೂ ರಕ್ತಸ್ರಾವ ಆಗಿದೆ. ಇದರಲ್ಲಿ ಗೊತ್ತಾಗ್ತಾ ಇದೆ. ದರ್ಶನ್ ಪವನ್‌ಗೆ ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಲು ಹೇಳಿದ್ದ ಅಂತಾ. ಇದನ್ನ ಪ್ರತ್ಯಕ್ಷದರ್ಶಿ ಹೇಳಿದ್ದಾರೆ ಎಂದು ವಾದ ಮಂಡಿಸಿದರು.

ಬಳಿಕ ಅರ್ಜಿ ವಿಚಾರಣೆಯನ್ನು 57ನೇ ಸಿಸಿಎಚ್ ಕೋರ್ಟ್ ನಾಳೆ ಮಧ್ಯಾಹ್ನ 12 ಗಂಟೆಗೆ ಮುಂದೂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!