ಹೊಸದಿಗಂತ ವರದಿ, ವಿಜಯಪುರ:
ನಗರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಅನಾರೋಗ್ಯಗೊಂಡ ಹಿನ್ನೆಲೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶನಿವಾರ ಆಶ್ರಮಕ್ಕೆ ಭೇಟಿ ನೀಡಿ, ಶ್ರೀಗಳ ಆರೋಗ್ಯ ವಿಚಾರಿಸಿ, ಕೊಠಡಿಯಿಂದ ಹೊರ ಬಂದು ಕಣ್ಣೀರು ಸುರಿಸಿದ ಘಟನೆ ನಡೆಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳು ಜೀವಂತ ದೇವರು. ಶ್ರೀಗಳಿಗೆ ಪರಮಾತ್ಮ ಇನ್ನಷ್ಟು ಆರೋಗ್ಯ ನೀಡಲಿ. ನಾಡಿಗೆ ಇನ್ನಷ್ಟು ಒಳ್ಳೆಯ ಸಂದೇಶ ನೀಡಲು ಶಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮೆಲ್ಲರ ಒಂದೊಂದು ದಿನದ ಆಯಸ್ಸು ಕಡಿಮೆ ಮಾಡಿ ಸಿದ್ಧೇಶ್ವರ ಶ್ರೀಗಳಿಗೆ ನೀಡಲಿ ಎಂದರು.