ಬೀಟಮ್ಮ & ಗ್ಯಾಂಗ್ ಮತ್ತೆ ಎಂಟ್ರಿ: ಅಪಾರ ಪ್ರಮಾಣದ ಬೆಳೆ ಹಾನಿ

ಹೊಸದಿಗಂತ ವರದಿ ಹಾಸನ :

22 ಕಾಡಾನೆಗಳ ಹಿಂಡು ರೈತರ ಕೃಷಿಭೂಮಿಯ ಮೇಲೆ ದಾಂಧಲೆ ನಡೆಸಿ ಕಾಫಿ, ಅಡಿಕೆ, ತೆಂಗು ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.

ಹಾಸನ ಜಿಲ್ಲೆಗೆ ಮತ್ತೆ ಬೀಟಮ್ಮ ಕಾಡಾನೆ ಗ್ಯಾಂಗ್ ವಾಪಾಸ್ ಆಗಿವೆ. ಬೀಟಮ್ಮ ಗ್ಯಾಂಗ್‌
ಬೇಲೂರು ತಾಲ್ಲೂಕಿನ, ಮಂಡಲಮನೆ, ಅಂಜನಹಳ್ಳಿ, ಕುಂಬಾರಹಳ್ಳಿ, ಹಳೇ ಗೆಂಡೇಹಳ್ಳಿ ಭಾಗದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. 22 ಕಾಡಾನೆಗಳ ಹಿಂಡಿನಿಂದ ದಾಂಧಲೆ ನಡೆದಿದ್ದು ಕಾಫಿ, ಅಡಿಕೆ, ತೆಂಗು ಸೇರಿದಂತೆ ಬೆಳೆ ನಾಶಪಡಿಸಿವೆ.

ಮನೆಯ ಬಳಿಯೇ ಬರುತ್ತಿರುವ ಕಾಡಾನೆಗಳ ಹಿಂಡನ್ನು ಕಂಡು ಆತಂಕದಲ್ಲಿ ಗ್ರಾಮಸ್ಥರು ಕಾಲ ಕಳೆಯುತ್ತಿದ್ದಾರೆ. ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದು, ಜೀವ ಕೈಯಲ್ಲಿ ಹಿಡಿದು ಹೊಲ, ಗದ್ದೆ, ಕಾಫಿ ತೋಟಗಳಿಗೆ ತೆರಳುತ್ತಿವಂತಾಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ ವ್ಯಕ್ತಪಡಿಸಿ, ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!