ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಬೆಂಗಳೂರು ಅರಮನೆ ಭೂ ಬಳಕೆ-ನಿಯಂತ್ರಣ ವಿಧೇಯಕ ಅಂಗೀಕಾರ

ಹೊಸ ದಿಗಂತ ಡಿಜಿಟಲ್ ಡೆಸ್ಕ್:
 
ವಿಧಾನಸಭೆಯಲ್ಲಿ ಇಂದು ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ 2025ವನ್ನು ಮಂಡಿಸಲಾಯಿತು.

ವಿಧಾನಸಭೆಯಲ್ಲಿ ಅರಮನೆ ಭೂ ನಿಯಂತ್ರ ವಿಧೇಯಕ ಅಂಗೀಕರಿಸುತ್ತಿದ್ದಂತೆ, ವಿಪಕ್ಷಗಳ ನಾಯಕರು ಸರ್ಕಾರಕ್ಕೆ ಚಾಮುಂಡೇಶ್ವರಿ ಶಾಪ ತಟ್ಟುತ್ತದೆ ಎಂಬುದಾಗಿ ಗುಡುಗಿದರು.

ಸದನದಲ್ಲಿ ವಿಧೇಯಕ ವಿರುದ್ಧ ಅಭಿಪ್ರಾಯವನ್ನು ವಿಪಕ್ಷ ಬಿಜೆಪಿ ನಾಯಕರು ತೋರಿಸಿದರ ನಡುವೆ ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ 2025 ರ ವಿಧೇಯಕ ಅಂಗೀಕಾರ ನೀಡಲಾಯಿತು.

ಬೆಂಗಳೂರು ಅರಮನೆಯ ಭೂ ಬಳಕೆಯ ವಿಚಾರದಲ್ಲಿ ಮೈಸೂರು ಮಹಾರಾಜರ ಕುಟುಂಬ ಹಾಗೂ ಸರ್ಕಾರದ ನಡುವೆ ಭೀಕರ ಕಾನೂನು ಜಟಾಪಟಿ ನಡೆದ ನಂತರ, ಕೊನೆಗೆ ಸುಪ್ರೀಂಕೋರ್ಟ್​ 3300 ಕೋಟಿ ರಾಜವಂಶಸ್ಥರಿಗೆ ಟಿಡಿಆರ್ ವರ್ಗಾವಣೆ ಮಾಡಬೇಕು ಎಂದು ಆದೇಶ ನೀಡಿತ್ತು.ಸದ್ಯ ಅರಮನೆಯ ಒಟ್ಟು ವ್ಯಾಪ್ತಿ 472 ಎಕರೆಯಿದೆ. ರಸ್ತೆ ಅಗಲೀಕರಣಕ್ಕಾಗಿ ಅರಮನೆಯ ಜಾಗ ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಈಗ ಸುಗ್ರೀವಾಜ್ಞೆಗೆ ಕಾಯ್ದೆ ರೂಪ ಕೊಡಲು ವಿಧೇಯಕ ಮಂಡನೆ ಮಾಡಲು ಸರ್ಕಾರ ಸಜ್ಜಾಗಿದೆ. ವಿಧೇಯಕ ಪ್ರಕಾರ ರಸ್ತೆ ಅಗಲೀಕರಣಕ್ಕೆ ಬೆಂಗಳೂರು ಅರಮನೆ ಜಾಗವನ್ನು ಸರ್ಕಾರ ಬಳಸಿಕೊಳ್ಳಬಹುದು ಆದರೆ ರಾಜವಂಶಸ್ಥರಿಗೆ 3300 ಕೋಟಿ ರೂಪಾಯಿಯನ್ನು ಟಿಡಿಆರ್ ವರ್ಗಾವಣೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಟಿಡಿಆರ್​ ವರ್ಗಾವಣೆ ಹಣದ ಮೌಲ್ಯವನ್ನು ಸುಪ್ರೀಂಕೋರ್ಟ್​​ನಲ್ಲಿ ಡಿಪಾಸಿಟ್ ಮಾಡಲು ನಿರ್ಧಾರ ಮಾಡಲಾಗಿದೆ. ವಿಧಾನ ಸೌಧದಲ್ಲಿ ಇಂದು ವಿಧೇಯಕ ಮಂಡನೆ ಮಾಡಲಾಯಿತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!