ಶಿಕ್ಷಕನಿಂದ ಹಣಕ್ಕೆ ಬೇಡಿಕೆ: ಲೋಕಾಯುಕ್ತ ಬಲೆಗೆ ಬಿದ್ದ ಬಿಇಒ

ಹೊಸದಿಗಂತ ವರದಿ ಹಾವೇರಿ:

ಬಾಕಿ ವೇತನ ಬಿಡುಗಡೆ ಮಾಡಲು ಶಿಕ್ಷಕರೊಬ್ಬರಿಗೆ ಹಣಕ್ಕೆ ಬೇಡಿಕೆ ಇಟ್ಟು, ಅದನ್ನು ಸ್ವೀಕರಿಸುವ ವೇಳೆ ಹಾವೇರಿ ಬಿಇಒ ಮೌನೇಶ ಬಡಿಗೇರ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಶಿಕ್ಷಕ ಪ್ರತಾಪ್ ಬಾರ್ಕಿ ತಮ್ಮ ಹಳೆಯ ವೇತನ ಬಟವಡೆ ಮಾಡಿಕೊಡಲು ಹಾವೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಅವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಈ ಸಂಬಂಧ ಶಿಕ್ಷಕರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಇಒ ಮೌನೇಶ ಬಡಿಗೇರ ೫೦ ಸಾವಿರ ರೂ., ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ಮಾತುಕತೆ ನಡೆದು ಈ ಪೈಕಿ ೧೫ ಸಾವಿರ ರೂಗಳನ್ನು ಮುಂಗಡವಾಗಿ ಪಡೆಯಲು ಶಿಕ್ಷಕ ಪ್ರತಾಪ ಬಾರ್ಕಿ ಅವರನ್ನು ಶನಿವಾರ ತಮ್ಮ ಮನೆಗೆ ಕರೆಯಿಸಿಕೊಂಡು ಹಣ ಪಡೆಯುತ್ತಿದ್ದಾಗಲೇ ದಾಳಿ ನಡೆಸಿದ ಲೋಕಾಯುಕ್ತರು ಅವರನ್ನು ಯಶಸ್ವಿಯಾಗಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವೇಳೆ ಬಿಇಒ ಮೌನೇಶ ಬಡಿಗೇರ ಮತ್ತು ಅವರ ವಾಹನ ಚಾಲಕ ಪಾಪಣ್ಣ ಲಮಾಣಿ ಅವರನ್ನು ಬಂಧಿಸಿದ್ದು, ಇನ್ನೋರ್ವ ಶಿಕ್ಷಕ ಮಲ್ಲಿಕಾರ್ಜುನ ಕುಂಬಾರಗೇರಿ ಲೋಕಾಯುಕ್ತರ ಕಣ್ಣುತಪ್ಪಿಸಿ ಅಲ್ಲಿಂದ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!