ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಸೀಸನ್ 10ರ ಜ.20ರಂದು ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಇನ್ನೊಬ್ಬ ಸ್ಪರ್ಧಿ ಫಿನಾಲೆಗೆ ಕಾಲಿಟ್ಟಿದ್ದಾರೆ ಎಂದು ಘೋಷಿಸಿದರು. ತುಕಾಲಿ ಸ್ಟಾರ್ ಬಿಗ್ ಬಾಸ್ ಕನ್ನಡ ಸೀಸನ್ 10 ರ ಗ್ರ್ಯಾಂಡ್ ಫಿನಾಲೆ ತಲುಪಿದ ಎರಡನೇ ಸ್ಪರ್ಧಿಯಾಗಿದ್ದಾರೆ. ಸಂಗೀತಾ ಈಗಾಗಲೇ ಫಿನಾಲೆಗೆ ನೇರ ಟಿಕೆಟ್ಗಳನ್ನು ಪಡೆದಿದ್ದಾರೆ. ಇದಲ್ಲದೆ, ಬಿಗ್ ಬಾಸ್ನ ಫಿನಾಲೆಗೆ ತಲುಪುವ ಮೂರನೇ ಸ್ಪರ್ಧಿ ವರ್ತೂರು ಸಂತೋಷ್ ಎಂದು ಕಿಚ್ಚ ಸುದೀಪ್ ಘೋಷಿಸಿದಾಗ ಎಲ್ಲರಿಗೂ ಆಶ್ಚರ್ಯವಾಯಿತು.
ತುಕಾಲಿ ಸಂತೋಷ್ ಈ ವಾರ ನಾಮಿನೇಟ್ ಆಗಿರಲಿಲ್ಲ. ಕೇವಲ ಒಂದು ಮತ ಪಡೆದಿದ್ದರಿಂದ ಅವರು ಸುರಕ್ಷಿತವಾಗಿದ್ದಾರೆ. ಈ ಬಗ್ಗೆ ಸುದೀಪ್ ಮಾಹಿತಿ ನೀಡಿ ಅಭಿನಂದಿಸಿದ್ದಾರೆ. ಆಗ ತುಕಾಲಿ ಕೂಡ ತನ್ನ ಹೆಂಡತಿಗೆ ಧನ್ಯವಾದ ಸೂಚಿಸಿದರು. ʻʻನನ್ನ ಹೆಂಡ್ತಿಗೆ ಚೆನ್ನಾಗಿ ಆಟ ಆಡ್ತೀನಿ ಅಂತ ಮಾತು ಕೊಟ್ಟಿದ್ದೆ, ಅದನ್ನು ಉಳಿಸಿಕೊಂಡಿದ್ದೇನೆ. ನೀವು ಪ್ರೀತಿ ಕೊಟ್ಟಿದ್ದೀರಾ, ನಿಮಗೂ ಧನ್ಯವಾದ ಸುದೀಪ್ ಅಣ್ಣಾʼʼಎಂದರು.
ಸಂಗೀತಾ ಶೃಂಗೇರಿ ಮತ್ತು ತುಕಾಲಿ ಸಂತೋಷ್ ನಂತರ, ವರ್ತೂರು ಸಂತೋಷ್ ಬಿಗ್ ಬಾಸ್ನ ಫೈನಲ್ ತಲುಪಿದ ಮೂರನೇ ಸ್ಪರ್ಧಿಯಾದರು. ಆ ಕ್ಷಣ ತುಕಾಲಿ ಸಂತೋಷ್ ಅವರಿಗೆ ತುಂಬಾ ಖುಷಿಪಟ್ಟರು.
ವರ್ತೂರು ಈ ಹಿಂದೆಯೂ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ. ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸದಂತೆ ವರ್ತೂರ್ ಸಂತೋಷ್ ಅವರು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಮಂಡ್ಯದಲ್ಲಿ ಹಳ್ಳಿಕಾರ್ ಹಸುವನ್ನು ಸಾಕುತ್ತಿರುವ ರೈತರು ಹಳ್ಳಿಕಾರ್ ಹೆಸರನ್ನೇ ಉಳಿಸಿಕೊಂಡು ಹಳ್ಳಿಕಾರ್ ಹೆಸರಿಗೆ ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಹುಲಿ ಉಗುರು ಪ್ರಕರಣದಲ್ಲಂತೂ ತಾವಾಗಿಯೇ ಮನೆಯಿಂದ ಆಚೆ ಹೋಗಬೇಕು ಅಂದುಕೊಂಡಿದ್ದರು. ಆದರೆ ಇಲ್ಲಿಯತನಕ ಆಡಿ ಇದೀಗ ಫಿನಾಲೆಗೆ ಹೋಗಿದ್ದಾರೆ