ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ‘ಮಕರ ಜ್ಯೋತಿ’ ದರುಶನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಸಾವಿರಾರು ಭಕ್ತರು ಅಯ್ಯಪ್ಪನ ಸನ್ನಿಧಾನದಲ್ಲಿ ‘ಮಕರ ಜ್ಯೋತಿʼʼ ಮತ್ತು ‘ಮಕರವಿಳಕ್ಕುʼʼದರುಶನಕ್ಕಾಗಿಗಿ ಕಾತುರದಿಂದ ಕಾಯುತ್ತಿದ್ದಾರೆ.
ಮಕರವಿಳಕ್ಕು ಕರ್ಪೂರದ ಆರತಿಯು ಶನಿವಾರ ಸಂಜೆ 6.30 ರಿಂದ 6.40 ರವರಗೆ ನಡೆಯಲಿದೆ. ಪೊನ್ನಂಬಲ ಮೇಡಿನಲ್ಲಿ ಮಕರ ಜ್ಯೋತಿ ಬೆಳಗಲಿದೆ.
ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಲಿದ್ದು, ಈ ಹೊತ್ತಿನಲ್ಲಿಯೇ ಮಕರ ಜ್ಯೋತಿ ದರುಶನವಾಗಲಿದೆ. ಆಕಾಶದಲ್ಲಿ ನಕ್ಷತ್ರಗಳು ಗೋಚರಿಸಲಿದ್ದು, ಅಯ್ಯಪ್ಪನ ಗರ್ಭಗುಡಿಯ ಮೇಲೆ ಗರುಡ ಪ್ರದಕ್ಷಿಣೆ ಮಾಡಲಿದೆ ಎಂಬ ನಂಬಿಕೆಯಿದೆ.