BIG NEWS | ವಾರಾಣಸಿಯ ಅವಳಿ ಸ್ಫೋಟ ಪ್ರಕರಣ: ಉಗ್ರ ವಲಿಯುಲ್ಲಾಗೆ ಮರಣದಂಡನೆ ವಿಧಿಸಿ ಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

2006ರ ವಾರಾಣಸಿಯಲ್ಲಿ ಅವಳಿ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ ವಾಲಿವುಲ್ಲಾ ಖಾನ್ ಗೆ ಉತ್ತರ ಪ್ರದೇಶದ ಗಾಜಿಯಾಬಾದ್​ ಕೋರ್ಟ್ ಗಲ್ಲು​ ಶಿಕ್ಷೆ ವಿಧಿಸಿದೆ.
ವಾಲಿವುಲ್ಲಾ 2006ರಲ್ಲಿ ವಾರಣಾಸಿಯ ದೇವಸ್ಥಾನ, ರೈಲ್ವೆ ನಿಲ್ದಾಣದಲ್ಲಿ ಬಾಂಬ್​ ಸ್ಫೋಟಿಸಿದ್ದನು.
ಎರಡನೆಯ ಪ್ರಕರಣದಲ್ಲಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
2006ರ ಮಾರ್ಚ್ 7ರಂದು ಸಂಕಟ್ ಮೋಚನ್ ದೇವಸ್ಥಾನ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ 20 ಮಂದಿ ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!