ಬೆಂಗಳೂರಿನ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ಬಿಗ್ ಟ್ವಿಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನ ಜೆ.ಪಿ. ನಗರದಲ್ಲಿ ಉದ್ಯಮಿ ಕುಟುಂಬದ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ತಿರುವು ಸಿಕ್ಕಿದೆ.

ಪೊಲೀಸರಿಗೆ ಕುಟುಂಬದ ಸದಸ್ಯರು ಬೆಂಕಿ ಹಚ್ಚಿಕೊಂಡಿಲ್ಲ ಎಂಬುದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಘಟನೆ ಹರಡಿತ್ತು. ಆದರೆ, ಇವರು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ಮಾಡಿದಾಗ, ಈ ದುರ್ಘಟನೆಗೆ ಮೂರ್ನಾಲ್ಕು ಕಾರಣಗಳಿರಬಹುದು ಎಂದು ಅನುಮಾನ ವ್ಯಕ್ತಪಡಿದ್ದಾರೆ.

ಮೊದಲು ಕುಟುಂಬದ ಫ್ಯಾಕ್ಟರಿ ನಷ್ಟವಾಗಿದ್ದರಿಂದ, ಬ್ಯಾಂಕ್‌ನವರು ಸಾಲ ವಸೂಲಿಗೆ ಬಂದು ಕಿರಿಕುಳ ನೀಡಿದ್ದರು. ಆದ್ದರಿಂದ ಮನೆಯವರು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು.ಆದರೆ, ಅಲ್ಲಿ ಬೆಂಕಿ ಹಚ್ಚಿಕೊಂಡಿದ್ದಕ್ಕೆ ಪೆಟ್ರೋಲ್ ಆಗಲೀ, ಗ್ಯಾಸ್ ಆಗಲೀ ಇರಲಿಲ್ಲ. ಆದರೆ, ಬೆಡ್‌ ರೂಮ್‌ನಲ್ಲಿ ಸುಟ್ಟುಕೊಂಡು ಸಾವನ್ನಪ್ಪಿದ್ದರು. ಇನ್ನು ಪೊಲೀಸರು ಬಂದು ಪರಿಶೀಲನೆ ಮಾಡಿದಾಗ ವಿದ್ಯುತ್ ವೈರ್ ಕಿತ್ತುಕೊಂಡು ಬಂದಿದ್ದು, ಎಲ್ಲರೂ ವಿದ್ಯುತ್ ವೈರ್‌ ಅನ್ನು ಹಿಡಿದುಕೊಂಡು ವಿದ್ಯುತ್‌ ಶಾಕ್‌ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಉಡುಪಿಯಿಂದ ಬಂದಿದ್ದ ಜಯಾನಂದ್ ಅವರು ವುಡ್‌ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿದ್ದರು. ಆದರೆ, ಫ್ಯಾಕ್ಟರಿ ನಷ್ಟವಾಗಿದ್ದರಿಂದ ಅದನ್ನು ಮುಚ್ಚಿದ್ದರು. ಫ್ಯಾಕ್ಟರಿಯಲ್ಲಿ ಇಟ್ಟಿದ್ದ ಕೆಮಿಕಲ್‌ ಬಾಟಲಿಗಳನ್ನು ಹಾಗೂ ಡೈ ಮೇಕಿಂಗ್ ಆಯಿಲ್‌ಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ನಿನ್ನೆ ಬ್ಯಾಂಕ್‌ನವರು ಸಾಲ ವಸೂಲಿಗೆ ಬಂದು ಕಿರುಕುಳ ನೀಡಿದ್ದರಿಂದ, ಗೌರವಕ್ಕೆ ಧಕ್ಕೆ ಉಂಟಾಗಿತ್ತು. ಇದರಿಂದ ಮನನೊಂದು ರಾತ್ರಿಯೆಲ್ಲಾ ಚಿಂತೆ ಮಾಡಿ ಬೆಳಗ್ಗಿನ ವೇಳೆ ತಾಯಿ ಸುಕನ್ಯಾ, ಮಕ್ಕಳಾದ ನಿಶ್ಚಿತ್ (ಅಂಗವಿಕಲ) ಹಾಗೂ ನಿಖಿತ್ ಬಾಗಿಲು ಹಾಕಿಕೊಂಡು ಮನೆಯಲ್ಲಿ ತಂದಿಟ್ಟಿದ್ದ ಫ್ಯಾಕ್ಟರಿಯ ಕೆಮಿಕಲ್ ಬಾಟಲಿಯನ್ನು ತೆರೆದು ಅದನ್ನು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ಬೆಂಕಿಯ ತಾಪದಿಂದ ವೈಯರ್ ಗಳು ಸುಟ್ಟಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಆದರೂ, ಉದ್ಯಮಿ ಕುಟುಂಬದ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯ (Forensic Science Laboratory-FSL) ತಂಡದ ಸಿಬ್ಬಂದಿ ಬಂದು ಸ್ಥಳದಲ್ಲಿ ಸಿಕ್ಕ ಕೆಲವು ವಸ್ತುಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಇನ್ನು ಸಾವಿಗೆ ಕಾರಣವಾದ ವಸ್ತುವಿನ ಬಗ್ಗೆ ಪತ್ತೆ ಮಾಡುತ್ತಿದ್ದಾರೆ. ಈವರೆಗೆ ಸಾವಿನ ಬಗ್ಗೆ ಮೂರ್ನಾಲ್ಕು ಆಯಾಮಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದ್ದು, ಎಫ್‌ಎಸ್‌ಎಲ್ ತಂಡದ ವರದಿಯ ನಂತರ ನಿಜಾಂಶ ಗೊತ್ತಾಗಲಿದೆ. ಮೂವರ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಇನ್ನು ಪೊಲೀಸರು ಕೂಡ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!