ಬರೋಬ್ಬರಿ 16ಮಂದಿ ಜೀವ ಬಲಿಪಡೆದ ಸಿಡಿಲು, ಸಿಎಂ ಸಂತಾಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿನ್ನೆ ಬಿಹಾರದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಮಂಗಳವಾರ (ಜೂನ್ 28,2022) ರಂದು ಸಿಡಿಲು ಬಡಿತಕ್ಕೆ 16 ಜನರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ನಾಲ್ಕು, ಭೋಜ್‌ಪುರ ಜಿಲ್ಲೆಯಲ್ಲಿ ಮೂರು, ಸರನ್ ಜಿಲ್ಲೆಯಲ್ಲಿ ಮೂರು, ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಎರಡು, ಅರಾರಿಯಾ ಜಿಲ್ಲೆಯಲ್ಲಿ ಇಬ್ಬರು, ಬಂಕಾ ಮತ್ತು ಮುಜಾಫರ್‌ಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಸಿಎಂ ನಿತೀಶ್ ಕುಮಾರ್ ಸಂತಾಪ ಸೂಚಿಸಿದ್ದಾರೆ.  ಕುಟುಂಬಗಳಿಗೆ ನಿತೀಶ್ ಕುಮಾರ್ ಸಾಂತ್ವನ ಹೇಳಿದ್ದು,  ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಜೂನ್ 18 ಮತ್ತು 19 ರಂದು ಬಿಹಾರದಾದ್ಯಂತ ಸಿಡಿಲು ಬಡಿದು 17 ಜನರು ಸಾವನ್ನಪ್ಪಿದ್ದರು. ಜೂನ್ ತಿಂಗಳೊಂದರಲ್ಲೇ ಬಿಹಾರದಲ್ಲಿ ಸಿಡಿಲು ಬಡಿದು 36 ಮಂದಿ ಸಾವನ್ನಪ್ಪಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!