ಹೊಸದಿಗಂತ ವರದಿ,ಕಲಬುರಗಿ:
ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮದುಮಗ ಸೇರಿದಂತೆ ಇಬ್ಬರ ಸಾವಾಗಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಬಳಿ ನಡೆದಿದೆ.
ಯಡ್ರಾಮಿ ತಾಲೂಕಿನ ಕೊಣಶಿರಸಗಿ ಗ್ರಾಮದ ದೇವೇಂದ್ರಪ್ಪಾ (30), ವಸ್ತಾರಿ ಗ್ರಾಮದ ಗುರುರಾಜ (30) ಎಂಬುವವರೇ ಮೃತಪಟ್ಟ ದುದೈ೯ವಿಗಳಾಗಿದ್ದಾರೆ.
ಏಪ್ರಿಲ್ 17ರಂದು ದೇವೇಂದ್ರಪ್ಪಾ ಅವರ ಮದುವೆ ನಿಶ್ಚಯವಾಗಿತ್ತು.ಸಂಬಂಧಿಕರಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಲು ಜೇರಟಗಿ ಗ್ರಾಮದತ್ತ ತೆರಳುವ ಸಂದರ್ಭದಲ್ಲಿ ಓವರಟೇಕ್ ಮಾಡಿಕೊಂಡು ಬಂದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಈ ಪರಿಣಾಮವಾಗಿ ಸಾವನ್ನಪ್ಪಿದ್ದಾರೆ.
ಈ ಕುರಿತು ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.