ದಿಗಂತ ವರದಿ ಬಳ್ಳಾರಿ:
ಲೋಕಸಭೆ ಸಾರ್ವತ್ರಿಕ ಚುನಾವಣೆಯ ಬಳ್ಳಾರಿ ಎಸ್ಟಿ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು ಮಂಗಳವಾರ ಕುಟುಂಬದ ಸದಸ್ಯರೊಂದಿಗೆ ಮತದಾನ ಮಾಡಿ ಗೆಲುವಿನ ನಗೆ ಬೀರಿದರು.
ನಗರದ ಮಹಿಳಾ ಪೋಲೀಸ್ ಠಾಣೆ ಬಳಿಯ ಮತಗಟ್ಟೆ ಕೇಂದ್ರಕ್ಕೆ ಪತ್ನಿ ಹಾಗೂ ಪುತ್ರರೊಂದಿಗೆ ತೆರಳಿ ಸರದಿಯಲ್ಲಿ ನಿಂತು ಮತದಾನ ಮಾಡಿ ಗೆಲುವಿನ ನಗೆ ಬೀರಿದರು.
ನಂತರ ಮಾತನಾಡಿದ ಅವರು, ರಾಜ್ಯದ 14 ಕ್ಷೇತ್ರದಲ್ಲೂ ಕಮಲ ಅರಳಲಿದೆ, ಇದರಲ್ಲಿ ಅನುಮಾನವೇ ಇಲ್ಲ, ಕಾಂಗ್ರೆಸ್ ನವರು ಎಸ್ಟೇ ತಿಪ್ಪರ್ ಲಾಗ್ ಹಾಕಿದರೂ ಗೆಲ್ಲೊಲ್ಲ, ಅವರ ಕುತಂತ್ರ ಬುದ್ಧಿ, ದುರಾಡಳಿತವನ್ನು ಜನರು ಗಮನಿಸಿದ್ದಾರೆ, ಅವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ಪ್ರಸಕ್ತ ಚುನಾವಣೆಯಲ್ಲಿ ಅವರ ಸುಳ್ಳು ಗ್ಯಾರಂಟೀಗಳು ಏನು ಕೆಲಸ ಮಾಡೋಲ್ಲ, ತೆರಿಗೆ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು, ನಮ್ಮ ಹಣ ಕಸಿದು ನಮಗೆ ಕೊಡುತ್ತಿದ್ದಾರೆ, ಎಂಬುದು ಜನರಿಗೆ ಮನವರಿಕೆಯಾಗಿದೆ, ಅವರ ಈ ದೊಂಬರಾಟ ನಡೆಯೋಲ್ಲ, ಕಳೆದ 10 ವರ್ಷಗಳ ಕಾಲ ಜನಪರ ಆಡಳಿತ ನಡೆಸಿದ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಜನರು ಸಂಕಲ್ಪ ಮಾಡಿದ್ದು, ಚುನಾವಣೆಯಲ್ಲಿ 400 ಕ್ಕೂ ಹೆಚ್ಚು ಕಮಲಗಳು ಅರಳಲಿದ್ದು, ಅದರಲ್ಲಿ ನಾನು ಒಬ್ಬ, ಮತ್ತೆ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.