ನ್ಯಾಯ ವಿರೋಧಿ ಕೆಲಸವನ್ನು ಬಿಜೆಪಿ ಸರ್ಕಾರ ಸಹಿಸಲ್ಲ: ಜೋಶಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಬಹಳ ವರ್ಷದ ನಂತರ ಇಂತಹ ಘಟನೆ ನಡೆದಿದೆ. ಗುಂಡಾ ಕ್ರಿಯೆ ಮತ್ತು ನ್ಯಾಯ ವಿರೋಧಿ ಕೆಲಸಕ್ಕೆ ಬಿಜೆಪಿ ಸರ್ಕಾರ ಸಹಿಸಲ್ಲ. ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೊಡ್ಡಮಟ್ಟದಲ್ಲಿ ಈ ಕೃತ್ಯ ನಡೆಯೋದಿತ್ತು. ಪೊಲೀಸರ ಉತ್ತಮ ಕಾರ್ಯದಿಂದ ತಪ್ಪಿದೆ. ತಪ್ಪು ಮಾಡಿದವರನ್ನು ಪೊಲೀಸ್‌ರು ಸಾಕ್ಷಿ ಸಮೇತ ಹಿಡಿಯುತ್ತಿದ್ದಾರೆ ಎಂದರು.
ತಂತ್ರಜ್ಞಾನ ಮುಂದುವರೆದಿದೆ. ಪೊಲೀಸರು ಗಲಾಟೆ ವೇಳೆ ಸೆರೆಹಿಡಿಯಲಾದ ವಿಡಿಯೋ ಮತ್ತು ವಿವಿಧ ಮಾಹಿತಿಗಳಿಂದ ತಪ್ಪಿತಸ್ಥರನ್ನು ಬಂಧಿಸಲಾಗುತ್ತಿದೆ. ಅವರು ಅಮಾಯಕರ ಎಂದು ಹೇಗೆ ಹೇಳುತ್ತಾರೆ. ಈ ಗಲಭೆ ಸಂಬಧಿಸಿದಂತೆ ಅಮಾಯಕರನ್ನು ಬಂಧಿಸಿದ್ದಾರೆ ಎಂದು ಹೇಳಿ ಪೊಲೀಸರ ಹತ್ತಿಕ್ಕೂವ ಕೆಲಸವಾಗಬಾರದು. ಪೊಲೀಸರು ಈಗಾಗಲೇ ಅದರಲ್ಲಿ ಅಮಾಯಕರು ಇದ್ದರೆ ಬಿಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!