ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ನೊಂದ ದಲಿತ, ಹಿಂದುಳಿದ ಸಮುದಾಯಕ್ಕೆ ಶ್ರದ್ಧೆಯಿಂದ ಮೀಸಲಾತಿ ನೀಡಿ ಶಾಶ್ವತ ಪರಿಹಾರ ನೀಡುವ ಕಾರ್ಯ ಮಾಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ. ಅವರು ಮಾಡಬೇಕಾದ ಕೆಲಸ ಬಿಜೆಪಿ ಮಾಡಿದ್ದರಿಂದ ಹತಾಶರಾಗಿ ಮೀಸಲಾತಿ ವಿಚಾರ ತಿರುಗುಬಾಣವಾಗಿದೆಯೆಂದು ಹೇಳುತ್ತಿದ್ದಾರೆ ಎಂದರು.
ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಊಹಾಪೋಹಗಳನ್ನು ಸೃಷ್ಟಿಸುತ್ತಿದ್ದಾರೆ. ನಾನು ಶಿಗ್ಗಾಂವಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಈಗಾಗಲೇ ಕೋರ್ ಕಮಿಟಿ ಮುಗಿದಿದ್ದು, ಮತದಾರರ ಪಟ್ಟಿ ಹೈಕಮಾಂಡ್ಗೆ ಕಳಹಿಸಲಾಗಿದೆ. ಏ.8ರಂದು ಸಭೆಯಿದ್ದು, ಬಳಿಕ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.