ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆಯಲ್ಲಿ ಸೋತರೂ ನೈತಿಕವಾಗಿ ಗೆದ್ದಿದ್ದೇವೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಮಂಗಳೂರಿನಲ್ಲಿ ಚುನಾವಣಾ ಫಲಿತಾಂಶದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ನೈತಿಕವಾಗಿ ವಿಫಲವಾಗಿದೆ. ಚಾರ್ ಸೊ ಪಾರ್ ಹೀಗೆ ಹೇಳುತ್ತಿದ್ದವರು ಈಗ ಅಧಿಕಾರ ಉಳಿಸಿಕೊಳ್ಳುವ ಸ್ಥಾನದಲ್ಲಿದ್ದಾರೆ ಎಂದರು.
ನಮ್ಮ ಒಕ್ಕೂಟವನ್ನು ಸೋಲಿಸಲು ಅವರು ಹಲವು ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಇಡಿ ಮತ್ತು ಐಟಿ ಬಳಸಿ ನಮ್ಮ ಮೇಲೆ ದಾಳಿ ಮಾಡಿ ಬ್ಯಾಂಕ್ ಖಾತೆಗಳು ಮತ್ತು ಹಣವನ್ನು ಸ್ಥಗಿತಗೊಳಿಸಿದರು ಎಂದು ವಾಗ್ದಾಳಿ ನಡೆಸಿದರು.