ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.
ಭಾಗಲ್ಪುರದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ಇಷ್ಟು ಸ್ಥಾನಗಳನ್ನು ಭದ್ರಪಡಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ. ಅವರು 150 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ನಾನು ಖಚಿತಪಡಿಸುತ್ತೇನೆ. 150 ಕ್ಕಿಂತ ಒಂದೇ ಒಂದು ಸ್ಥಾನವೂ ಬರಲ್ಲ ಎಂದು ತಿಳಿಸಿದ್ದಾರೆ.
ಭಾರತಕ್ಕೆ ಎರಡು ರೀತಿಯ ಹುತಾತ್ಮರ ಅಗತ್ಯವಿಲ್ಲ. ಭಾರತದಲ್ಲಿ ಮೈತ್ರಿ ಸರ್ಕಾರ ಬಂದ ತಕ್ಷಣ ನಾವು ಅಗ್ನಿವೀರ್ ಯೋಜನೆಯನ್ನು ಕೊನೆಗೊಳಿಸುತ್ತೇವೆ. ಭಾರತಕ್ಕೆ ಎರಡು ರೀತಿಯ ಹುತಾತ್ಮರ ಅಗತ್ಯವಿಲ್ಲ. ಎಲ್ಲರಿಗೂ ಪಿಂಚಣಿ ಸಿಗಬೇಕು ಎಂದು ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಕನಿಷ್ಠ ತೆರಿಗೆ ಜಾರಿಗೆ ತರಲಾಗುವುದು. ಜಿಎಸ್ಟಿ ಬದಲಾವಣೆ ಮಾಡುತ್ತೇವೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ ದ್ವಿಗುಣಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.