ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಹೊಸ ಚಿತ್ರ ‘ಪಠಾಣ್’ ವಿರುದ್ಧ ಈಗಾಗಲೇ ಅನೇಕ ರಾಜಕೀಯ ನಾಯಕರು ಮಾತನಾಡಿದ್ದು, ಟೀಕೆಗಳು ಮಾಡುತ್ತಿದ್ದಾರೆ.
ಇದರ ನಡುವೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೋಲ್ಕತಾ ಚಲನಚಿತ್ರೋತ್ಸವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಕುರಿತು ಮಾತನಾಡಿದ್ದು, ಇದೀಗ ಅನೇಕ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಪಠಾಣ್ ವಿರುದ್ಧದ ಬಹಿಷ್ಕಾರದ ಮಾತುಗಳ ನಡುವೆ ಬಚ್ಚನ್ ಈಗಲೂ, ನಾಗರಿಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆ ಬಿಜೆಪಿ ವಾಗ್ದಾಳಿ ನಡೆಸುತ್ತಿದ್ದು, ಇತ್ತ ಅಮಿತಾಭ್ ಪರವಾಗಿ ಟಿಎಂಸಿ ಬ್ಯಾಟ್ ಬೀಸಿದೆ.
ಅಮಿತಾಭ್ ಅವರ ಸಮರ್ಥನೆಗೆ ಬಂದ ಟಿಎಂಸಿ ನಾಯಕಿ ನುಸ್ರತ್ ಜಹಾನ್,’ನಿರಂಕುಶ ಆಡಳಿತದ ಚಿಹ್ನೆಗಳು ಚಲನಚಿತ್ರಗಳನ್ನು ನಿಷೇಧಿಸುವುದು, ಪತ್ರಕರ್ತರನ್ನು ಬಂಧಿಸುವುದು ಮತ್ತು ಸತ್ಯವನ್ನು ಮಾತನಾಡುವ ಸಾಮಾನ್ಯ ಜನರನ್ನು ಶಿಕ್ಷಿಸುವುದು ಸೇರಿವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಚ್ಚುವುದು ಎಂದರೆ ಅಷ್ಟೇ ಎಂದಿದ್ದಾರೆ.