ಹೊಸದಿಗಂತ ಡಿಜಿಟಲ್ ಡೆಸ್ಕ್:
2024 ರ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ಹಿಮಾಚಲ ಪ್ರದೇಶದಿಂದ ಸ್ಪರ್ಧಿಸಲು ಸಿದ್ಧ ಎಂದು ಕಂಗನಾ ರಣಾವತ್ ಹೇಳಿದ್ದಾರೆ.
ರಾಜಕೀಯಕ್ಕೆ ಸೇರುವ ಕುರಿತು ಮಾಧ್ಯಮವೊಂದರ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಕಂಗನಾ ರಣಾವತ್ ಉತ್ತರಿಸಿದ್ದು, ಸಾರ್ವಜನಿಕರು ಬಯಸಿದರೆ ಮತ್ತು ಬಿಜೆಪಿ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ತಾನು ಸಿದ್ಧನಿದ್ದೇನೆ. ಈ ಮೂಲಕ ಸಾರ್ವಜನಿಕ ಸೇವೆಗೆ ಮುಕ್ತ ಎಂದು ಹೇಳಿದ್ದಾರೆ.
‘ನಾನು ಹೇಳಿದಂತೆ, ಹಿಮಾಚಲ ಪ್ರದೇಶದ ಜನರು ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದರೆ ಅದು ಉತ್ತಮವಾಗಿರುತ್ತದೆ. ಆದ್ದರಿಂದ, ಖಂಡಿತವಾಗಿಯೂ, ಇದು ಶೋಭಾಗ್ಯ ಕಿ ಬಾತ್ ಆಗಿರುತ್ತದೆ ಅಂತ ಹೇಳಿದ್ದಾರೆ.