ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ಬಾಲಿವುಡ್ ನಟಿ ರವೀನಾ ಟಂಡನ್ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್ ನಟಿ ರವೀನಾ ಟಂಡನ್ ಅವರು ಗುರುವಾರ ಮಹಾರಾಷ್ಟ್ರದ ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ನೇಮಕಗೊಂಡರು.
ಮಹಾರಾಷ್ಟ್ರಕ್ಕೆ ವನ್ಯಜೀವಿ ಸೌಹಾರ್ದ ರಾಯಭಾರಿಯಾಗಿ ನಟಿ ರವೀನಾ ಟಂಡನ್ ಅವರ ಉತ್ಸಾಹ ಮತ್ತು ವನ್ಯಜೀವಿಗಳ ಮೇಲಿನ ಪ್ರೀತಿ ಹಾಗೂ ಅವರ ಸಂರಕ್ಷಣೆಯನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡಿದ್ದೇವೆ ಎಂದು ಮಹಾರಾಷ್ಟ್ರ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
ಈ ವೇಳೆ ಮಾತನಾಡಿದ ನಟಿ ವೀನಾ ಟಂಡನ್ , ಜನರು ಮತ್ತು ಪ್ರಕೃತಿಯ ಪ್ರಯೋಜನಕ್ಕಾಗಿ ನೈಸರ್ಗಿಕ ಜಗತ್ತನ್ನು ಉಳಿಸಿಕೊಳ್ಳುವುದು ನಮ್ಮ ಮೊದಲ ಧ್ಯೇಯ. ಈ ಅವಕಾಶ ನೀಡಿದ ಮಹಾರಾಷ್ಟ್ರಕ್ಕೆ ನಾನು ಕೃತಜ್ಞಳಾಗಿದ್ದೇನೆ. ಸಮರ್ಪಿತ ಮತ್ತು ಭಾವೋದ್ರಿಕ್ತ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ ಎಂದು ಧನ್ಯವಾದ ತಿಳಿಸಿದರು.
ನಟಿ ರವೀನಾ ಇತ್ತೀಚೆಗೆ ತೆರೆಕಂಡ ಪ್ಯಾನ್ ಇಂಡಿಯಾ ಚಲನಚಿತ್ರ ‘ಕೆಜಿಎಫ್- 2’ ನಲ್ಲಿ​ ನಟ ಯಶ್ ಮತ್ತು ಸಂಜಯ್ ದತ್ ಅವರೊಂದಿಗೆ ನಟಿಸಿದ್ದರು. ಅವರು ಮುಂದಿನ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ‘ಘುಡ್ಚಾಡಿ’ ನಲ್ಲಿ ಸಂಜಯ್ ದತ್, ಪಾರ್ಥ್ ಸಮತಾನ್ ಮತ್ತು ಕುಶಲಿ ಕುಮಾರ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!