ಇನ್ಮೇಲೆ ರಿವ್ಯೂ ಬರೆಯಲ್ಲ ಅಂದ್ರಲ್ಲ ಕ್ರಿಟಿಕ್‌ ಕೆಆರ್‌ಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್‌ನ ಖ್ಯಾತ ವಿಮರ್ಶಕ ಕೆಆರ್‌ಕೆ…ಚಿತ್ರ ವಿಶ್ಲೇಷಕ ಮಾತ್ರವಲ್ಲದೆ ಚಲನಚಿತ್ರ ನಿರ್ಮಾಪಕ, ಬರಹಗಾರ ಮತ್ತು ನಟನಾಗಿಯೂ ಕೆಲಸ ಮಾಡಿದ್ದಾರೆ. ವಿವಾದಾತ್ಮಕ ವಿಮರ್ಶೆಗಳಿಂದ ರಾಷ್ಟ್ರಮನ್ನಣೆ ಗಳಿಸಿದ ಈ ವಿಮರ್ಶಕ ನಾಯಕ ನಟಿಸಿದ ಏಕೈಕ ಚಿತ್ರ ‘ದೇಶದ್ರೋಹಿ’ ಕೂಡ ವಿವಾದಾಸ್ಪದವಾಗಿತ್ತು.

ಇದೀಗ ಈ ಸಿನಿಮಾದ ವಿಮರ್ಶಕ ಮತ್ತೊಂದು ಸೆನ್ಸೇಷನಲ್ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನು ಮುಂದೆ ಯಾವುದೇ ವಿಮರ್ಶೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಾಲಿವುಡ್ ಸ್ಟಾರ್ ಹೀರೋ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ತಮಿಳಿನ ರಿಮೇಕ್ ಚಿತ್ರ ‘ವಿಕ್ರಂ ವೇದ’ವನ್ನು ಸಿನಿಮಾ ನನ್ನ ಕೊನೆಯ ರಿವ್ಯೂ ಎಂದಿದ್ದಾರೆ.

ಈ ವಿಮರ್ಶಕ ಈ ಹಿಂದೆ ರಾಜಮೌಳಿ ಅವರ ‘ಆರ್‌ಆರ್‌ಆರ್‌’ ಚಿತ್ರವನ್ನೂ ಕೆಟ್ಟ ಸಿನಿಮಾ ಎಂದು ಟೀಕಿಸಿದ್ದಲ್ಲದೆ ರಾಜಮೌಳಿಯನ್ನು ಜೈಲಿಗೆ ಹಾಕಬೇಕು ಎಂದು ಕಿಡಿ ಕಾರಿದ್ದ. ಸುಳ್ಳು ವಿಮರ್ಶೆ ನೀಡಿ ಜೈಲಿಗೆ ಹೋಗಿ ಬಂದ ನಂತರ ‘ಕೆಆರ್‌ಕೆ’ಗೆ ಇದೀಗ ಬುದ್ದಿ ಬಂದಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!