ಹೊಸದಿಗಂತ ಡಿಜಿಟಲ್ ಡೆಸ್ಕ್;
ಕೇಂದ್ರ ಸರ್ಕಾರ ಜನರ ಒತ್ತಡಕ್ಕೆ ಈಗ ಜನಗಣತಿ ಜೊತೆಗೆ ಜಾತಿಗಣತಿ ಮಾಡುವ ಘೋಷಣೆ ಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ ಸರ್ಕಾರದ ವತಿಯಿಂದ ನಡೆದ ಪೌರ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಾತಿಗಣತಿ ಆಗಬೇಕು ಅಂತ ರಾಹುಲ್ ಗಾಂಧಿ ಇಡೀ ದೇಶದಲ್ಲಿ ಓಡಾಟ ಮಾಡಿದರು. ಏಪ್ರಿಲ್ 16, 2023 ರಂದು ನಾನೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಜಾತಿಗಣತಿ ಮಾಡುವಂತೆ ಮನವಿ ಮಾಡಿದ್ದೆ. ಆದರೆ ನಾವು ಮನವಿ ಮಾಡಿದಾಗ ಮಾಡದೇ ಮೋದಿ ಅವರು ಬುಧವಾರ ವಿಶೇಷ ಕ್ಯಾಬಿನೆಟ್ ಮಾಡಿ ಜಾತಿಗಣತಿ ಮಾಡೋ ಘೋಷಣೆ ಮಾಡಿ ತಾವು ಕ್ರೆಡಿಟ್ ಪಡೆಯೋದಕ್ಕೆ ಮುಂದಾಗಿದೆ ಎಂದು ಹೇಳಿದರು.