#BoycottMaldives | ಉಡುಪಿ ಬೀಚ್​ನ ಸೌಂದರ್ಯ ಹೊಗಳಿದ ಸೆಹ್ವಾಗ್ ಗೆ ಅಮಿತಾಭ್​ ಬಚ್ಚನ್ ನೀಡಿದ್ರು ಸಾಥ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಲ್ಡೀವ್ಸ್​ (Maldives) ಸಚಿವರು ಅವಹೇಳನಕಾರಿಯಾಗಿ ಪೋಸ್ಟ್​ ಮಾಡಿದನ್ನು ವಿರೋಧಿಸಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ಎಲ್ಲೆಡೆ ಬೈಕಾಟ್​ ಮಾಲ್ಡೀವ್ಸ್​ ಟ್ರೆಂಡ್​ ಶುರು ಆಗುವುದರ ಜೊತೆಗೆ ಇತ್ತ ವೆಲ್​ಕಮ್​ ಟು ಲಕ್ಷದ್ವೀಪ್​ ಹ್ಯಾಷ್​ಟ್ಯಾಗ್​ ಕೂಡ ಶುರುವಾಗಿದೆ.

ಭಾರತದಲ್ಲಿನ ಸುಂದರ ಬೀಚ್​ಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತಿದೆ. ವಿರೇಂದ್ರ ಸೆಹ್ವಾಗ್​ ಅವರು ಉಡುಪಿ (Udupi) ಮುಂತಾದ ಬೀಚ್​ಗಳ ಸೌಂದರ್ಯವನ್ನು ಕೊಂಡಾಡಿದ್ದಾರೆ. ಅದಕ್ಕೆ ಅಮಿತಾಭ್​ ಬಚ್ಚನ್​ (Amitabh Bachchan) ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿ, ಪಾಂಡಿಚೆರಿ, ಅಂಡಮಾನ್​ ಮುಂತಾದ ಬೀಚ್​ಗಳು ಸುಂದರವಾಗಿವೆ. ಭಾರತದಲ್ಲಿ ಇಂಥ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಿ, ಪ್ರವಾಸೋದ್ಯಮ ವೃದ್ಧಿಸಬೇಕು. ನಿಮಗೆ ತಿಳಿದಿರುವ ಇಂತಹ ಸ್ಥಳಗಳ ಬಗ್ಗೆ ಹೇಳಿ ಎಂದು ವೀರೇಂದ್ರ ಸೆಹ್ವಾಗ್​ ಟ್ವೀಟ್​ ಮಾಡಿದ್ದಾರೆ.

ಇದಕ್ಕೆ ರಿಪ್ಲೈ ಮಾಡಿರುವ ಅಮಿತಾಭ್​ ಬಚ್ಚನ್​, ನೀವು ಹೇಳುತ್ತಿರುವುದು ಸರಿಯಾಗಿದೆ. ಇದು ಸೂಕ್ತ ಸಮಯ. ನಮ್ಮ ಸ್ಥಳಗಳೇ ಅತ್ಯುತ್ತಮವಾಗಿವೆ. ನಾನು ಅಂಡಮಾನ್​ ಮತ್ತು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದೇನೆ. ಅವು ತುಂಬ ಸುಂದರವಾದ ಸ್ಥಳಗಳು. ಅಲ್ಲಿನ ಅಂಡರ್​ವಾಟರ್​ ಅನುಭವ ತುಂಬ ಚೆನ್ನಾಗಿದೆ ಎಂದಿದ್ದಾರೆ.

ಈ ಟ್ವೀಟ್​ ವೈರಲ್​ ಆಗುತ್ತಲೇ ಸೋಷಿಯಲ್​ ಮೀಡಿಯಾಗಳಲ್ಲಿ ಉಡುಪಿಯ ಬಗ್ಗೆಯೂ ಹುಡುಕಾಟ ಜೋರಾಗಿದೆ. ಉಡುಪಿಯ ಬಗ್ಗೆ ಅರಿವಿಲ್ಲದ ಹೊರ ರಾಜ್ಯಗಳವರು ಇಲ್ಲಿಯ ಬೀಚ್​ ಬಗ್ಗೆ ಸರ್ಚ್​ ಮಾಡುತ್ತಿದ್ದಾರೆ.

ಅದೇ ಇನ್ನೊಂದೆಡೆ, ಅಕ್ಷಯ್​ ಕುಮಾರ್​ ಕಂಗನಾ ರಣಾವತ್​, ಸಚಿನ್​ ತೆಂಡೂಲ್ಕರ್​, ಸುರೇಶ್ ರೈನಾ, ಇರ್ಫಾನ್​ ಪಠಾಣ್​ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ಲಕ್ಷದ್ವೀಪಕ್ಕೆ ವೆಲ್​ಕಮ್​ ಟ್ರೆಂಡ್​ ಶುರು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!