ಪಕ್ಷಕ್ಕೆ ಯೋಗ್ಯವಾದವರನ್ನು ಮಾತ್ರ ಕರೆತನ್ನಿ: ಖರ್ಗೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಕ್ಷಕ್ಕೆ ಯಾರನ್ನೇ ಕರೆತರುವ ಮುನ್ನ ಸ್ವಲ್ಪ ಯೋಚನೆ ಮಾಡಿ, ಅವರ ಪೂರ್ವಾಪರ ವಿಚಾರಿಸಿ ಅವರು ನಮ್ಮ ಪಕ್ಷಕ್ಕೆ ಯೋಗ್ಯರೇ ಎನ್ನುವ ಬಗ್ಗೆ ಆಲೋಚನೆ ಮಾಡಿ ನಂತರ ಪಕ್ಷದ ಬಾಗಿಲು ತೆಗೆಯಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ಜಗದೀಶ್ ಶೆಟ್ಟರ್ ಬಿಜೆಪಿಗೆ ಮತ್ತೆ ಹೋಗಿರುವ ಬಗ್ಗೆ ಮಾತನಾಡಿದ ಖರ್ಗೆ ಯಾರೇ ಆಗಲಿ ಹೀಗೆ ಬಂದ್ರು ಹಾಗೇ ಹೋದ್ರು ಅನ್ನುವ ಹಾಗೆ ಆಗಬಾರದು, ಕರೆತರುವ ಮುನ್ನವೇ ಯೋಚನೆ ಮಾಡಬೇಕು.

ಯಾವುದೇ ವಸ್ತು ಖರೀದಿ ಮಾಡುವಾಗಲೂ ಅದರ ಗುಣಮಟ್ಟದ ಬಗ್ಗೆ ಎಷ್ಟೆಲ್ಲಾ ಯೋಚನೆ ಮಾಡುತ್ತೀವಿ. ಪಕ್ಷಕ್ಕೆ ವ್ಯಕ್ತಿಗಳನ್ನು ಕರೆತರುವಾಗ ಅವರ ನಡವಳಿಗೆ, ಹಿಸ್ಟರಿ, ನಂಬಿರುವ ಸಿದ್ಧಾಂತ ಎಲ್ಲವನ್ನು ಪರಿಶೀಲಿಸಿ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!