ಹೊಸದಿಗಂತ ವರದಿ ಚಿತ್ರದುರ್ಗ:
ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರ ಪುತ್ರ ಎಂದು ಜವಾಬ್ದಾರಿ ಕೊಟ್ಟಿಲ್ಲ. ಹಂತ ಹಂತವಾಗಿ ಅವರ ಕೆಲಸವನ್ನು ಗುರುತಿಸಿ ಪಕ್ಷ ಅವಕಾಶ ನೀಡಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಚಿತ್ರದುರ್ಗದಲ್ಲಿ ಮಂಗಳವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ವಿಜಯೇಂದ್ರ ಅವರಿಗೆ ಭವಿಷ್ಯದಲ್ಲಿ ಉತ್ತಮ ಅವಕಾಶ ಇದೆ. ಪಕ್ಷ ಅವರಿಗೆ ಜವಾಬ್ದಾರಿ ನೀಡಿದ್ದು, ಅವರಿಗೆ ಶುಭವಾಗಲಿ ಎಂದರು.
ಚುನಾವಣೆ ಸೋತ ಬಳಿಕ ಬಿ.ವೈ.ವಿಜಯೇಂದ್ರಗೆ ಪಕ್ಷ ಅವಕಾಶ ನೀಡಿದೆ. 30 ವರ್ಷಗಳಿಂದ ನಾನು ವಿಜಯೇಂದ್ರ ಅವರನ್ನ ನಾನು ನೋಡಿದ್ದೇನೆ. ಯುವಕರಿಗೆ ಭವಿಷ್ಯದಲ್ಲಿ ಅವಕಾಶ ಸಿಗಬೇಕು. ಕಾಂಗ್ರೆಸ್ ನಾಯಕರು ಲೋಕಸಭಾ ಎಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ರಾಜಕಾರಣದಲ್ಲಿ ಕೆಲವೊಮ್ಮೆ ಮನುಷ್ಯನ ವರ್ಚಸ್ಸಿನ ಮೇಲೆ ಕುರ್ಚಿಗೆ ಬೆಲೆ. ಕಿರಿಯರು, ಹಿರಿಯರು ಎಂಬ ಪ್ರಶ್ನೆ ಬರುವುದಿಲ್ಲ. ರಾಜ್ಯದ ಯುವಕರನ್ನ, ಹಿರಿಯರನ್ನ ಒಗ್ಗಟ್ಟು ಮೂಡಿಸಲು ವಿಜಯೇಂದ್ರ ಅವರಿಗೆ ಹೊಣೆ ನೀಡಿದ್ದಾರೆ ಎಂದು ಹೇಳಿದರು.