ಜನರಿಂದ, ಜನರಿಗಾಗಿ, ಜನರಿಗೋಸ್ಕರ ಬಜೆಟ್: ನಿರ್ಮಲಾ ಸೀತಾರಾಮನ್​

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕೇಂದ್ರ ಬಜೆಟ್​ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಮಂಡಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ತಿಳಿಸಿದರು.

ಮಾಧ್ಯಮವೊಂದಕ್ಕೆ ಭಾನುವಾರ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ತೆರಿಗೆ ಕಡಿತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪೂರ್ಣ ಬೆಂಬಲವಿತ್ತು. ಇದು ಈ ಹಿಂದೆಯೇ ಜಾರಿಯಾಗಬೇಕಿತ್ತು. ಆದರೆ, ಅಧಿಕಾರಿಗಳ ಮನವೊಲಿಸುವಲ್ಲಿ ಸಮಯ ಹಿಡಿಯಿತು ಎಂದು ಅವರು ಹೇಳಿದರು.

ಪ್ರಾಮಾಣಿಕ ತೆರಿಗೆ ಪಾವತಿಸುತ್ತಿದ್ದರೂ, ನಮಗೆ ಯಾವುದೇ ಲಾಭ ಇಲ್ಲ ಎಂದು ಪ್ರತಿ ಬಾರಿಯೂ ಆರೋಪಿಸುತ್ತಿದ್ದ ದೇಶದ ಮಧ್ಯಮ ವರ್ಗದವರಿಗೆ ಈ ಬಾರಿ ಹೆಚ್ಚಿನ ರಿಯಾಯಿತಿಗಳನ್ನು ನೀಡಲಾಗಿದೆ. ಅವರ ಆಕಾಂಕ್ಷೆಗಳಿಗೆ ಸರ್ಕಾರ ಸ್ಪಂದಿಸಿದೆ. ಮಿಡಲ್​ ಕ್ಲಾಸ್​ ಜನರ ಧ್ವನಿಯನ್ನು ನಾವು ಆಲಿಸಿದ್ದೇವೆ ಎಂದು ಸೀತಾರಾಮನ್​ ತಿಳಿಸಿದರು.

ರೂಪಾಯಿ ಮೌಲ್ಯದಲ್ಲಿ ಕುಸಿತದ ಬಗ್ಗೆ ಮಾತನಾಡಿರುವ ಅವರು, ಅಮೆರಿಕನ್​ ಡಾಲರ್​ ಎದುರು ಮಾತ್ರ ಭಾರತದ ರೂಪಾಯಿ ಕುಸಿಯುತ್ತಿದೆ. ಬಿಟ್ಟರೆ, ವಿಶ್ವದ ಯಾವುದೇ ಕರೆನ್ಸಿ ವಿರುದ್ಧ ನಮ್ಮ ಕರೆನ್ಸಿ ಸ್ಥಿರವಾಗಿದೆ. ಈ ಬಗ್ಗೆ ಟೀಕೆ ಮಾಡುವುದೇ ಅಪಮೌಲ್ಯ ಎಂದರು.

ರೂಪಾಯಿ ಮೌಲ್ಯ ಪಾತಾಳಕ್ಕಿಳಿದಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ನಿರಾಧಾರ. ಡಾಲರ್​ ಹೊರತಾಗಿ ನಮ್ಮ ರೂಪಾಯಿ ಗಟ್ಟಿಯಾಗಿದೆ. ಇತರ ಕರೆನ್ಸಿಗಳಿಗೆ ಹೋಲಿಸಿಕೊಂಡರೆ, ನಮ್ಮ ರೂಪಾಯಿ ಅತಿ ಕಡಿಮೆ ಅಪಮೌಲ್ಯವಾಗಿದೆ ಎಂದು ತಿಳಿಸಿದರು.

.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!