ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಜೆಟ್ ಅಧಿವೇಶನಕ್ಕೂ ಮುನ್ನ ಎಲ್ಲಾ 11 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯಲು ನಿರ್ಧರಿಸಲಾಗಿದೆ.
ಹಕ್ಕುಬಾಧ್ಯತಾ ಸಮಿತಿಗೆ ಶಿಫಾರಸು ಮಾಡಲಾದ ಎಲ್ಲಾ 11 ರಾಜ್ಯಸಭಾ ಸಂಸದರ ಅಮಾನತು ನಾಳೆಯಿಂದ ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಹಕ್ಕುಚ್ಯುತಿ ನೋಟಿಸ್ ನೀಡಿ ಅಮಾನತುಗೊಂಡ 11 ಮಂದಿಯಲ್ಲಿ ಆರು ಮಂದಿ ಕಾಂಗ್ರೆಸ್ ಪಕ್ಷದವರು, ನಾಲ್ವರು ಎಡಪಕ್ಷಗಳು ಮತ್ತು ಒಬ್ಬರು ಡಿಎಂಕೆಗೆ ಸೇರಿದವರಾಗಿದ್ದಾರೆ.
ಅಮಾನತುಗೊಂಡ 11 ರಾಜ್ಯಸಭಾ ಸಂಸದರು
1 ಜೆಬಿ ಮಾಥರ್ ಹಿಶಾಮ್
2. ಡಾ.ಎಲ್.ಹನುಮಂತಯ್ಯ
3. ನೀರಜ್ ಡಾಂಗಿ
4 ರಾಜಮಣಿ ಪಟೇಲ್
5 ಕುಮಾರ್ ಕೇತ್ಕರ್
6. ಜಿ.ಸಿ.ಚಂದ್ರಶೇಖರ್
7. ಬಿನೋಯ್ ವಿಶ್ವಂ
8 ಸಂದೋಶ್ ಕುಮಾರ್ ಪಿ.
9.ಎಂ ಮೊಹಮ್ಮದ್ ಅಬ್ದುಲ್ಲಾ
10. ಡಾ.ಜಾನ್ ಬ್ರಿಟ್ಟಾಸ್
11 ಎ.ಎ.ರಹೀಮ್