ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯ ಗುಂಡ್ಲುಪೇಟೆಯ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮ ದೇವಸ್ಥಾನದಲ್ಲಿ ಇನ್ಮುಂದೆ ಡ್ರೋನ್ ಹಾಗೂ ಕ್ಯಾಮೆರಾ ಬಳಸುವಂತಿಲ್ಲ.
ಈ ಬಗ್ಗೆ ಗುಂಡ್ಲುಪೇಟೆ ತಹಸೀಲ್ದಾರ್ ಟಿ. ರಮೇಶ್ಬಾಬು ಆದೇಶ ಹೊರಡಿಸಿದ್ದು, ಇಲ್ಲಿ ಸಂಜೆ ವೇಳೆಗೆ ಕಾಡಾನೆಗಳು ಬರುವುದು ಸಾಮಾನ್ಯ. ಡ್ರೋನ್ ಹಾಗೂ ಕ್ಯಾಮೆರಾ ಬಳಕೆಯಿಂದ ಕಾಡಾನೆಗಳಿಗೂ ತೊಂದರೆ ಹಾಗೂ ಮನುಷ್ಯರಿಗೂ ಆನೆಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ.
ಇತ್ತೀಚೆಗೆ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಸಂಜೆವೇಳೆ ಆನೆಗಳು ಜನರ ಎದುರೇ ಕಾಣಿಸಿಕೊಂಡಿವೆ. ಅದರ ಜೊತೆ ಸೆಲ್ಫಿ ತೆಗೆದುಕೊಳ್ಳುವುದು, ಅದರ ಫೋಟೊ ವಿಡಿಯೋಗಳನ್ನು ಜನ ಮಾಡುತ್ತಿದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ವಲಯ ಅರಣ್ಯಾಧಿಕಾರಿಗಳ ಕೋರಿಕೆ ಮೇಲೆ ಆದೇಶ ಹೊರಡಿಸಲಾಗಿದೆ.