ಹರಾಜಿಗೂ ಮುನ್ನ ಚೆನ್ನೈಗೆ ಬಂದಿಳಿದ ಕ್ಯಾಪ್ಟನ್ ಧೋನಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2022 ಮೆಗಾ ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ.
ಈ ನಡುವೆ ಸಿಎಸ್‌ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ಬಂದಿಳಿದಿದ್ದಾರೆ.
ಮೂಲಗಳ ಪ್ರಕಾರ ಈ ಬಾರಿ ಎಲ್ಲ ಪಂದ್ಯಗಳು ಮುಂಬೈನಲ್ಲಿ ನಡೆಯಲಿದೆ. ಇನ್ನು ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ಫೆ.12,13ರಂದು ನಡೆಯಲಿದೆ. ಈಗಾಗಲೇ ಎಲ್ಲ ಫ್ರಾಂಚೈಸಿ ಹರಾಜು ಪ್ರಕ್ರಿಯೆಗೆ ಭರ್ಜರಿ ತಯಾರಿ ನಡೆದಿದೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿಶೇಷ ಯೋಜನೆ ರೂಪುಗೊಳಿಸಿದಂತೆ ಕಾಣುತ್ತಿದೆ.

ಹರಾಜು ಪ್ರಕ್ರಿಯೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಧೋನಿ ಚೆನ್ನೈಗೆ ಬಂದು ಇಳಿದಿದ್ದಾರೆ. ಹರಾಜಿಗೂ ಮುನ್ನ ಯಾವ ಆಟಗಾರರನ್ನು ಮೊದಲು ಖರೀದಿಸಬೇಕು, ಇದರ ಕುರಿತಾದ ಪ್ಲ್ಯಾನ್ ಆಗಲಿದೆ. ಮ್ಯಾನೇಜ್‌ಮೆಂಟ್ ಜೊತೆ ಚರ್ಚೆ ಮಾಡಿ ತಂಡದ ಆಟಗಾರರ ಖರೀದಿ ಮಾಡಲು ಧೋನಿ ಚೆನ್ನೈಗೆ ಬಂದಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!