ಬೈಕ್‌ಗೆ ಕಾರು ಡಿಕ್ಕಿ : ಇಬ್ಬರು ಯುವಕರು ಸಾವು

ಹೊಸ ದಿಗಂತ ವರದಿ, ಮೈಸೂರು:

ಕಾರು ಡಿಕ್ಕಿ ಹೊಡೆದು ಇಬ್ಬರು ಯುವಕರು ಸಾವಿಗೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಪಡುವಾರಹಳ್ಳಿಯ ಇಂದ್ರಾಣಿ ಎಂಬುವರ ಪುತ್ರ ಹೃತಿಕ್ ಧರಣಿ (24) ಹಾಗೂ ಹಿನಕಲ್ ನಿವಾಸಿಯಾದ ಶಕುಂತ ಎಂಬುವರ ಮಗ ಕೆ.ಎನ್.ಸಂಪತ್ (19) ಮೃತಪಟ್ಟವರು. ಇವರು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಹೊಸವರ್ಷದ ಸಂಭ್ರಮಾಚರಣೆ ಮುಗಿಸಿಕೊಂಡು ನಗರದೆಲ್ಲೆಡೆ ಸೋಮವಾರ ಮುಂಜಾನೆ 3 ಗಂಟೆಯ ತನಕ ಬೈಕ್‌ನಲ್ಲಿ ಸುತ್ತಾಡಿದ್ದಾರೆ. ಬಳಿಕ ಹಿನಕಲ್‌ನಲ್ಲಿರುವ ಮನೆಗೆ ಸಂಪತ್‌ನನ್ನು ಬಿಟ್ಟು ಬರಲೆಂದು ಹೃತಿಕ್ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಜೆಸಿ ಕಾಲೇಜಿನ ರಸ್ತೆಯ ತಿರುವಿನಲ್ಲಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಇಬ್ಬರ ತಲೆಗೂ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿವಿಪುರಂ ಸಂಚಾರ ಠಾಣೆಯ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!