ದಿಗಂತ ವರದಿ ವಿಜಯಪುರ:
ಚಲಿಸುತ್ತಿದ್ದ ಕಾರು ಪಲ್ಟಿಯಾಗಿರುವ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,
ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಹತ್ತಿರ ನಡೆದಿದೆ.
ದೊಡ್ಡಯ್ಯ ಪುರಾಣಿಕಮಠ (37) ಪುಷ್ಪಾವತಿ ( 55) ಮೃತ ದುರ್ದೈವಿಗಳು. ಮೃತರು ಜಿಲ್ಲೆಯ ಕರಭಂಟನಾಳದವರು. ಇನ್ನು ಹೆಂಡತಿ, ಎರಡು ಮಕ್ಕಳು ಹಾಗೂ ಅತ್ತೆ ಜೊತೆ ಢವಳಗಿಯಿಂದ ಮುದ್ದೇಬಿಹಾಳಕ್ಕೆ ಹೋಗುವಾಗ ಈ ಅಪಘಾತ ಆಗಿದೆ.
ಅಲ್ಲದೇ, ನಿರ್ಮಲಾ ದೊಡ್ಡಯ್ಯ ಪುರಾಣಿಕಮಠ ಹಾಗೂ ಎರಡು ಪುಟ್ಟ ಮಕ್ಕಳಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳಿಗೆ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..