ಹೊಸದಿಗಂತ ವರದಿ ಬೇಲೂರು :
ಸುಮಾರು 15 ವರ್ಷಗಳಿಂದ ಪಟ್ಟಣದ ನಂಜುಂಡೇಶ್ವರ ದೇಗುಲದಲ್ಲಿ ಆಚರಿಸಿಕೊಂಡು ಬಂದಿರುವ ಗಿರಿಜಾ ಕಲ್ಯಾಣ ಹಾಗೂ ಶಿವದೀಪೋತ್ಸವವನ್ನು ಈ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಸೋಮವಾರ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ವಿಜಯಕೇಶವ ದಂಪತಿಗಳು ಆಯೋಜಿಸಿದ್ದು, ಭಕ್ತರ ಹಾಗೂ ದಾನಿಗಳ ಸಹಕಾರದಿಂದ ವಿಜೃಂಭಣೆಯಿಂದ ನಡೆಯಿತು.
ದೇಗುಲದಲ್ಲಿ ಕಾಶಿ ಯಾತ್ರಾ ಮಹೋತ್ಸವ, ಧಾರಾ ಮಹೋತ್ಸವ ಸೇರಿದಂತೆ ಹತ್ತು ಹಲವು ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ದೇಗುಲದ ಪ್ರವೇಶ ಧ್ವಾರವನ್ನು ತಳಿರು ತೋರಣಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಪ್ರಧಾನ ಅರ್ಚಕ ವೇದಬ್ರಹ್ಮ ಕೆ ಅರ್ ಮಂಜುನಾಥ್ ಅವರ ನೇತೃತ್ವದಲ್ಲಿ ವೇದ ಪರಾಯಣ, ಗಂಗಾವರಣ, ಸುಪ್ರಭಾತ, ಕಾಶಿಯಾತ್ರೆ , ಯಜ್ಞೋಪಾಧಿಧಾರಣೆ, ಸಂಭಂದ ಮಾಲೆ ಧಾರಾ ಮಹೋರ್ತ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಂಗಲ್ಯ ಧಾರಣೆ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ವೇದಬ್ರಹ್ಮ ಕೆ ಆರ್ ಮಂಜುನಾಥ್, ಪ್ರತೀವರ್ಷದಂತೆ ನಂಜುಂಡೇಶ್ವರ ದೇಗುಲದಲ್ಲಿ ಶಿವದೀಪೋತ್ಸವ ಆಚರಿಸಿಕೊಂಡು ಬರಲಾಗುತ್ತಿತ್ತು. ಈ ಬಾರಿ ಭಕ್ತರ ಅಶೋತ್ತರದಂತೆ ಸೇವಾರ್ಥದಾರರಾದ ವಿಜಯಕೇಶವ ಹಾಗೂ ಹರೀಶ್ ಕುಟುಂಬ ವರ್ಗದವರಿಂದ ಗಿರಿಜಾಕಲ್ಯಾಣೋತ್ಸವ ಆಚರಿಸುವ ಮೂಲಕ ಲೋಕ ಕಲ್ಯಾಣಾರ್ಥವಾಗಿ ವಿವಿಧ ಹೋಮ ಪೂಜೆ ನೆರವೇರಿಸಲಾಗಿದೆ. ರಾಜ್ಯದಲ್ಲಿ ಮಳೆ ಬೆಳೆಯಾಗಿ ಸುಖ ಶಾಂತಿ ನೆಲಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಗಿದೆ ಎಂದರು.
ಬಂದಂತ ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಮುತ್ತೈದೆಯರಿಗೆ ಭಾಗೀನ ನೀಡಿದರು.
ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ರಾಜ್ಯ ನಿರ್ದೇಶಕ ವಿಜಯಕೇಶವ, ತೊಚ ಅನಂತಸುಬ್ಬರಾಯ್, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ , ನಾಗಭೂಷಣ್ ಹಾಗೂ ಇತರರು ಹಾಜರಿದ್ದರು.