ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದ್ದು, ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ವಜಾಗೊಳಿಸುವಂತೆ ಕೋರಿದೆ.
ಸಂಸತ್ತಿನಲ್ಲಿ ಒಪ್ಪಿತವಾಗಿ ಪಾಸ್ ಆಗಿರುವ ಕಾಯ್ದೆಯ ಯಾವುದೇ ನಿಬಂಧನೆಗಳ ಮೇಲಿನ ತಡೆಯಾಜ್ಞೆಯನ್ನು ಕೇಂದ್ರ ಸರ್ಕಾರ, ವಿರೋಧಿಸಿದ್ದು, ಸಾಂವಿಧಾನಿಕವಾಗಿ ರಚನೆ ಆಗಿರುವ ನ್ಯಾಯಾಲಯಗಳು ಶಾಸನಬದ್ಧ ನಿಬಂಧನೆಗೆ ನೇರವಾಗಿ ಅಥವಾ ಪರೋಕ್ಷವಾಗಿ ತಡೆ ನೀಡುವುದಿಲ್ಲ ಎಂಬುದು ಕಾನೂನಿನಲ್ಲಿ ಸ್ಥಿರವಾದ ನಿಲುವು ಇದೆ ಎಂದು ಕೇಂದ್ರ ಹೇಳಿದೆ.
ವಕ್ಫ್ ಕಾನೂನಿನ ಇತ್ತೀಚಿನ ತಿದ್ದುಪಡಿಗಳನ್ನು ಸಮರ್ಥಿಸಿಕೊಂಡ ಕೇಂದ್ರವು, ಧಾರ್ಮಿಕ ಮತ್ತು ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಕಾನೂನು ಸವಾಲುಗಳನ್ನು ಪರಿಶೀಲಿಸುತ್ತಿರುವಾಗ ಅದರ ನಿಬಂಧನೆಗಳಿಗೆ ಯಾವುದೇ ಮಧ್ಯಂತರ ವಿರಾಮ ವಿಧಿಸಬಾರದು ಎಂದು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದೆ.