ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಸಂಭ್ರಮ ಸಡಗರ. ಈ ಕ್ಷಣಅಧಿಕ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವರ ದರುಶನ ಮಾಡಿದರು.
ಇಂದು ಚೌತಿಯ ಪುಣ್ಯ ದಿನವು ರಜಾ ದಿನವಾದ ಕಾರಣಅಧಿಕ ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವರ ದರುಶನ ಪಡೆದು ನಡೆಯುವ ಸೇವೆಗಳನ್ನು ನೆರವೇರಿಸಿದರು.
ಆದಿಸುಬ್ರಹ್ಮಣ್ಯ, ಶ್ರೀ ದೇವಳದ ಹೊರಾಂಗಣ, ಒಳಾಂಗಣ, ರಥಬೀದಿ, ಕುಮಾರಧಾರ, ರಾಜರಸ್ತೆ ಮುಂತಾದ ಕಡೆ ಅಧಿಕ ಸಂಖ್ಯೆಯಲ್ಲಿ ಭಕ್ತರು ನೆರದಿದ್ದರು.ಮದ್ಯಾಹ್ನದ ಸಮಯ ಶ್ರೀ ದೇವರ ದರುಶನಕ್ಕೆ ರಥಬೀದಿಯಿಂದ ಸರದಿ ಸಾಲು ಕಂಡು ಬಂತು.