ಹೊಸದಿಗಂತ ವರದಿ,ಕಲಬುರಗಿ:
ಚಂದ್ರಯಾನ -3 ಉಪಗ್ರಹ ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು,ಈ ದಿನ ಭಾರತದ ಪಾಲಿಗೆ ಐತಿಹಾಸಿಕ ದಿನವಾಗಿದೆ ಎಂದು ಶ್ರೀ ರಾಮ ಸೇನೆಯ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದ್ದಾರೆ.
ಚಂದ್ರಯಾನ -3 ಲ್ಯಾಂಡ್ ಬಳಿಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಯಾನ ಯಶಸ್ವಿಯಾಗಿ ಲ್ಯಾಂಡ್ ಆಗಿರುವದು ಕೆಲ ಮತ್ತು ಜೀವಿಗಳು/ಬುದ್ದಿ ಕೆಟ್ಟವರನ್ನು ಹೊರತುಪಡಿಸಿ ಎಲ್ಲರಿಗೂ ಹಬ್ಬದ ದಿನವಾಗಿದೆ ಎಂದರು.
ಭಾರತೀಯ ವಿಜ್ಞಾನಿಗಳು ಮನಸ್ಸು ಮಾಡಿದರೆ, ಏನು ಬೇಕಾದರೂ ಸಾಧಿಸಬ ಎಂಬುದಕ್ಕೆ ಆಗಸ್ಟ್ -23,2023 ದಿನವೇ ಉದಾಹರಣೆಯಾಗಿದೆ.ದೇಶದ ಕೀರ್ತಿಯನ್ನು ನಮ್ಮ ವಿಜ್ಞಾನಿಗಳು ವಿಶ್ವದಾದ್ಯಂತ ಪರಸರಿಸಿದ್ದು,ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ನಮ್ಮ ಭಾರತದ ವಿಜ್ಞಾನಿಗಳ ಸಾಹಸಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ,ವಿಜ್ಞಾನಿಗಳ ತಂಡಕ್ಕೆ ಅಭಿನಂದನೆಗಳು ಸಲ್ಲಿಸಿದರು.