ಹೊಸದಿಗಂತ ವರದಿ , ಗದಗ:
ಚಂದ್ರಯಾನ ಯಶಸ್ವಿಗೊಳಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ ವಿಜ್ಞಾನಿಗಳಲ್ಲಿ ಒಬ್ಬರಾದ ನಗರದ ವೀರನಾರಾಯಣ ದೇವಸ್ಥಾನದ ಹತ್ತಿರದ ನಿವಾಸಿ ಸುದೀಂದ್ರ ಬಿಂದಗಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಹಾಗೂ ಮಾಜಿ ಶಾಸಕ ಡಿ.ಆರ್. ಪಾಟೀಲ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಿಜ್ಞಾನಿ ಸುಧೀಂದ್ರ ಬಿಂದಿಗಿ ಅವರು ಚಂದ್ರಯಾನ ಯಶಸ್ವಿ, ಸಂಶೋಧನೆ ಹಾಗೂ ಚಂದ್ರಯಾನದ ರೋಚಕ ಅಧ್ಯಯನವನ್ನು ವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಗುರಣ್ಣ ಬಳಗಾನೂರ,ಶ್ರೀ ನಿವಾಸ ಹುಯಿಲಗೋಳ,ಪ್ರಭು ಬುರಬುರೆ,ಬಲರಾಮ ಬಸವಾ,ವಿನೋದ ಶಿದ್ಲಿಂಗ,ಸಿದ್ದು ಪಾಟೀಲ ವಾದಿರಾಜ ಸೊರಟೂರು,ಪರಿಮಳ ಸೊರಟೂರ ಹಾಗೂ ಕುಟುಂಬದವರು ಉಪಸ್ಥಿತರಿದ್ದರು.