ವಿಧಾನ ಸಭೆಯಲ್ಲಿ ಗದ್ದಲ: ಕುಸಿದು ಬಿದ್ದ ಬಸವನಗೌಡ ಯತ್ನಾಳ್, ಆರ್. ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ವಿಧಾನಸಭೆ ಇಂದು ಗದ್ದಲದ ಗೂಡಾಗಿದೆ. ಬಿಜೆಪಿ ಶಾಸಕರು ಬಿಲ್ ಗಳನ್ನು ಹರಿದು ಹಾಕಿ, ಸ್ಪೀಕರ್ ಪೀಠದ ಮೇಲೆಯೇ ಎಸೆದಿದ್ದಾರೆ.

ಈ ವೇಳೆ ಅಸಭ್ಯ ವರ್ತನೆ ತೋರಿದ ಆರೋಪದ ಮೇಲೆ 10 ಮಂದಿ ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ ಖಾದರ್ ಅಮಾನತುಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಅಮಾನತುಗೊಂಡು ಶಾಸಕರನ್ನು ಮಾರ್ಷಲ್ ಗಳು ಹೊತ್ತು ಹೊರ ಹಾಕಿದ್ದಾರೆ.

ಶಾಸಕರನ್ನು ಹೊತ್ತು ಹೊರತೆಗೆದುಕೊಂಡು ಹೋಗುವಾಗ ಬಸವನಗೌಡ ಯತ್ನಾಳ್ ಮತ್ತು ಆರ್‍ ಅಶೋಕ್ ಕುಸಿದು ಬಿದ್ದಿದ್ದಾರೆ.
ವಿಧಾನ ಸಭೆಯಲ್ಲಿದ್ದ ವೈದ್ಯರು ಬಿಪಿ ಚೆಕಪ್ ಮಾಡಿದ್ದು, ಬಳಿಕ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!