ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಟೇರ ಕಥೆ ನಾನೇ ಮಾಡಿಸಿದ್ದು, ಕಾಟೇರ ಟೈಟಲ್ ನಂದು ಎಂದ ಉಮಾಪತಿಗೆ ಇದೀಗ ನಿರ್ದೇಶಕ ತರುಣ್ ಸುಧೀರ್ ಉತ್ತರಿಸಿದ್ದಾರೆ.
ಉಮಾಪತಿ ಅವರು ಉಪಾಧ್ಯಕ್ಷ ಪ್ರಮೋಶನ್ ಸಮಯದಲ್ಲಿ ಕಾಟೇರ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ದರ್ಶನ್ ಅವರು ಸ್ಪಷ್ಟನೆ ನೀಡಿದ್ದಾರೆ. ಉಮಾಪತಿ ಅವರು ಮಾತುಗಳು ಸರಿಯಾಗಿರಬೇಕು ಎಂದು ಹೇಳಿದ್ದಾರೆ. ಇದು ಇಬ್ಬರಿಗೂ ಅನ್ವಯಿಸುತ್ತದೆ ಎಂದರು ತರುಣ್ ಸುಧೀರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಉಮಾಪತಿಯವರು ನನ್ನ ಹಣದಿಂದ ಕಾಟೇರ ಕಥೆಯನ್ನು ಮಾಡಿದ್ದಾರೆ ಎಂದಿದ್ದಾರೆ. ರೆಸಾರ್ಟ್ ನಲ್ಲಿ ಮೂರು ದಿನ ಕಳೆದಿದ್ದು ನಿಜ. ಆದರೆ ಸರ್, ಚಿತ್ರದ ಕಥೆಯನ್ನು ಮೂರೇ ದಿನದಲ್ಲಿ ಚಿತ್ರೀಕರಿಸಬಹುದು ಎಂದು ತರುಣ್ ಪ್ರಶ್ನಿಸಿದ್ದಾರೆ.
ಕಥೆ ನಾನು ಮಾಡಿಸಿದ್ದು ಅಂತ ಹೇಳಬಾರದು ತಂಡದ ಜೊತೆ ಇದ್ದೆ ಅಂತ ಹೇಳಿದ್ರೆ ಇತರ ಆಗ್ತಿರ್ಲಿಲ್ಲ. ಕಾಟೇರ ಸಿನಿಮಾ ನೋಡಿಲ್ಲ ಎನ್ನುತ್ತಾರೆ ಉಮಾಪತಿ ಸರ್. ಆದರೆ, ಕಾಟೇರನ ಕಥೆಯನ್ನು ಬಿಂಬಿಸುವ ಚಿತ್ರದ ಪೋಸ್ಟರ್ ನೋಡಿಯೇ ಹೀಗೆ ಹೇಳಿದ್ದಾರೆ ಎಂದು ತರುಣ್ ಸುಧೀರ್ ತಿಳಿಸಿದ್ದಾರೆ.