ರಾಜಸ್ಥಾನದಲ್ಲಿ BJPಗೆ ಸ್ಪಷ್ಟ ಬಹುಮತ: ಠಾಕೂರ್ ವಿಶ್ವಾಸ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೂಟಿ ಸರ್ಕಾರದಿಂದ ಯಾವಾಗ ಮುಕ್ತಿ ಸಿಗುತ್ತದೋ ಎಂಬ ಜನರ ಕಾಯುವಿಕೆ ನಾಳೆ ಅಂತ್ಯವಾಗಲಿದೆ.

ಸುಳ್ಳು ಹೇಳಿಕೆಗಳನ್ನು ಮತ್ತು ಭರವಸೆಗಳ ನೀಡುವುದು ಕಾಂಗ್ರೆಸ್‌ನ ಅಭ್ಯಾಸವಾಗಿದೆ ಎಂದು ಟೀಕಿಸಿದರು. ‘ಕಾಂಗ್ರೆಸ್‌ ಮುಖವಾಡ ಬಯಲಾಗಿದೆ. ನಾಳೆ ಫಲಿತಾಂಶ ಮಾತ್ರ ಹೊರಬೀಳಲಿದೆ. ಸಾರ್ವಜನಿಕರು ಬಯಸಿದ ಉತ್ತಮ ಆಡಳಿತ ಬಿಜೆಪಿ ಸರ್ಕಾರದ ರೂಪದಲ್ಲಿ ರಾಜ್ಯದ ಜನರಿಗೆ ದೊರೆಯಲಿದೆ. ಜನರು ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಡಬಲ್‌ ಎಂಜಿನ್‌ ಸರ್ಕಾರವನ್ನು ಬಯಸುತ್ತಾರೆ ಎಂದು ಠಾಕೂರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!